Karnataka Politics: ಅರಾಜಕತೆ ಅಂದ್ರೆ ಕಾಂಗ್ರೆಸ್... ಈಶ್ವರಪ್ಪ ಪರ ಬೊಮ್ಮಾಯಿ ಬ್ಯಾಟಿಂಗ್

Apr 14, 2022, 4:59 PM IST

ಬೆಂಗಳೂರು(ಏ. 14)  ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil Suicide) ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆಎಸ್  ಈಶ್ವರಪ್ಪ  (KS Eshwarappa) ಬಂಧನವಾಗಬೇಕು ಎಂದು ಕಾಂಗ್ರೆಸ್ (Congress) ಬೀದಿಗೆ ಇಳಿದಿದೆ.  ಡಿಕೆ ಶಿವಕುಮಾರ್(DK Shivakumar), ಸಿದ್ದರಾಮಯ್ಯ (Siddaramaiah) ಆದಿಯಾಗಿ ಕಾಂಗ್ರೆಸ್ ನಾಯಕರು ಸಿಎಂ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. 

Karnataka Politics: ಸಿಎಂ ಮನೆಗೆ ಮುತ್ತಿಗೆ ಹಾಕಲು ಹೋಗಿ ಜಾರಿಬಿದ್ದ ಡಿಕೆಶಿ.. ಹಿಂದಿಂದ ತಳ್ಳಿದ್ರಾ!? ವಿಡಿಯೋ

ಕಾಂಗ್ರೆಸ್ ಪ್ರತಿಭಟನೆಗೆ ಸಿಎಂ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ.  ಕಾಂಗ್ರೆಸ್ ಕಾಲದಲ್ಲಿಯೇ ಅರಾಜಕತೆ ಇತ್ತು ಎನ್ನುವ ಮೂಲಕ ಸಚಿವ ಈಶ್ವರಪ್ಪ ಪರ ಬ್ಯಾಟ್ ಬೀಸಿದ್ದಾರೆ.