RR ನಗರ ಕ್ಷೇತ್ರ ವಶಕ್ಕೆ ಕೈ ರಣತಂತ್ರ; ನಾಲ್ವರಲ್ಲಿ ಫೈನಲ್ ಯಾರು?

Oct 1, 2020, 3:07 PM IST

ಬೆಂಗಳೂರು (ಅ. 01): ಆರ್ ಆರ್‌ ನಗರ ಕ್ಷೇತ್ರವನ್ನು ಕೈ ವಶ ಮಾಡಿಕೊಳ್ಳಲು ಕಾಂಗ್ರೆಸ್ ಕಸರತ್ತು ನಡೆಸುತ್ತಿದೆ. ಅಭ್ಯರ್ಥಿಗಳ ಆಯ್ಕೆಯಲ್ಲಿ ಲೆಕ್ಕಾಚಾರ ಶುರುವಾಗಿದೆ. ಆರ್‌ಆರ್‌ ನಗರ ಟಿಕೆಟ್ ಮೇಲೆ ನಾಲ್ವರು ಕಣ್ಣಿಟ್ಟಿದ್ಧಾರೆ.

ಶಾಲೆ ಪುನಾರಂಭಕ್ಕೆ ನಮಗೆ ಆತುರವಿಲ್ಲ, ಸರ್ಕಾರದ ನಿಯಮ ಪಾಲಿಸುತ್ತೇವೆ: ಖಾಸಗಿ ಶಾಲಾ ಒಕ್ಕೂಟ

ಬೆಂಗಳೂರು ಉತ್ತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಾಜ್‌ಕುಮಾರ್, ಡಿಕೆ ರವಿ ಪತ್ನಿ ಕುಸುಮಾ, ಮಾಗಡಿ ಮಾಜಿ ಶಾಸಕ ಬಾಲಕೃಷ್ಣ, MR ಸೀತಾರಾಮ್ ಪುತ್ರ ರಕ್ಷಾ ರಾಮಯ್ಯ ಟಿಕೆಟ್ ರೇಸ್‌ನಲ್ಲಿದ್ಧಾರೆ. ಮುನಿರತ್ನ ಎದುರಾಳಿಯಾಗಿ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಕೈ ಪಾಳಯದಲ್ಲಿ ಚರ್ಚೆ ಶುರುವಾಗಿದೆ. ಎಲ್ಲಾ ನಾಯಕರ ಜೊತೆ ಚರ್ಚಿಸಿ ನಿರ್ಧರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹೇಳಿದ್ದಾರೆ.