Karnataka Budget 2023: ಅವರು ಮಾಡಿದನ್ನೇ ಇವರೂ ಮಾಡ್ತೀದ್ದಾರೆ..ಬಜೆಟ್‌ ಬಗ್ಗೆ ಎಚ್‌ಡಿಕೆ ಪ್ರತಿಕ್ರಿಯೆ

Jul 7, 2023, 8:25 PM IST

ಬೆಂಗಳೂರು (ಜು.7): ಕಳೆದ ಬಾರಿ  ಬೊಮ್ಮಾಯಿ ಬಜೆಟ್‌ ಮಂಡಿಸುವಾಗ ಕಿವಿಗೆ ಚೆಂಡು ಹೂವು ಇಟ್ಕೊಬಂದವರೇ ಇವತ್ತು  ಕನ್ನಡನಾಡಿನ ಜನರ ತಲೆ ಮೇಲೆ ಹೂವ ಇಡುತ್ತಿದ್ದಾರೆ. ಈ ಬಜೆಟ್‌ನಲ್ಲಿ ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸೋದು ಬಿಟ್ಟು ಏನಿಲ್ಲ ಎಂದು ಎಚ್‌ಡಿಕೆ ಪ್ರತಿಕ್ರಿಯೆ ನೀಡಿದ್ದಾರೆ.

2018ರಲ್ಲಿ ಕಾಂಗ್ರೆಸ್‌ ಪಕ್ಷ ಸೇರಿಕೊಂಡು ನಾವು ಅಧಿಕಾರ ಮಾಡಿದ್ದಾಗ ನೀರಾವರಿ ಇಲಾಖೆಯ ಯೋಜನೆಗಳ ಕ್ಯಾರಿ ಓವರ್‌ ಮಾಡಿದ್ದಾರೆ. ಆ ಬಳಿಕ ಬಿಜೆಪಿ ಸರ್ಕಾರವೂ ಕ್ಯಾರಿ ಓವರ್‌ ಮಾಡಿತ್ತು. ಈಗ ಕಾಂಗ್ರೆಸ್‌ ಸರ್ಕಾರ ಕೂಡ ಅದನ್ನೇ ಮಾಡ್ತಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಕಿವಿಗೆ ಹೂವಿಟ್ಟು ಪ್ರತಿಭಟಿಸಿದ ಕಾಂಗ್ರೆಸ್ ಇದೀಗ ಜನರ ತಲೆಗೆ ಚೆಂಡು ಹೂವಿಟ್ಟಿದೆ; ಹೆಚ್‌ಡಿಕೆ ಟೀಕೆ!

ಬಿಜೆಪಿಯ ಆರ್ಥಿಕ ಶಿಸ್ತು ಬಗ್ಗೆ ಪ್ರಶ್ನೆ ಮಾಡಿದ್ದವರೇ ಈಗ ಅಶಿಸ್ತಿನ ಮಾರ್ಗ ಹಿಡಿದಿದ್ದಾರೆ ಎಂದು ಕುಮಾರಸ್ವಾಮಿ ಟೀಕೆ ಮಾಡಿದ್ದಾರೆ. ಅದರೊಂದಿಗೆ ಇಡೀ ಬಜೆಟ್‌ನ ಪೋಸ್ಟ್‌ ಮಾರ್ಟಮ್‌ ಕೂಡ ಮಾಡಿದ್ದಾರೆ.