Corona Lockdown 'ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ'

Jan 11, 2022, 12:37 PM IST

ರಾಮನಗರ, (ಜ.11): ಮೇಕೆದಾಟು ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರ, ತೀವ್ರ ಟೀಕೆ ಮಾಡುತ್ತಿದೆ. ಕೊರೋನಾ ಹೆಚ್ಚಳವಾದ್ರೆ, ಕಾಂಗ್ರೆಸ್ ಪಾದಯಾತ್ರೆ ಕಾರಣ ಎಂದು ಹೇಳಿದೆ.

Covid Rules Violation: 'ಸಿಎಂರಿಂದಲೇ ಕೋವಿಡ್‌ ನಿಯಮ ಉಲ್ಲಂಘನೆ, ನಮ್ಮ ಬಳಿ ದಾಖಲೆ ಇವೆ'

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ಲಾಕ್‌ಡೌನ್ ಪರಿಸ್ಥಿತಿ ಬಿಜೆಪಿಯಿಂದ ಆಗಬೇಕು ಅಷ್ಟೇ. ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಬಿಜೆಪಿಯವರೇ ಕೋವಿಡ್ ನಿಯಮ ಪಾಲಿಸ್ತಿಲ್ಲ ಎಂದು ತಿರುಗೇಟು ನೀಡಿದರು.