ಕೊರೋನಾ ಲಸಿಕೆ: ಸೋತ್ರೆ ಜನರನ್ನ ಸಾಯಿಸ್ತೀರಾ? ಬಿಜೆಪಿಯ ವಿರುದ್ಧ ತಿರುಗಿಬಿದ್ದ ವಿಶ್ವನಾಥ್!

Oct 23, 2020, 4:08 PM IST

ಬೆಂಗಳೂರು (ಅ.23): ಬಿಹಾರದ ಬೆನ್ನಲ್ಲೇ ರಾಜ್ಯದಲ್ಲೂ  ಕೊರೋನಾ ಲಸಿಕೆ ರಾಜಕೀಯ ಶುರುವಾಗಿದೆ. ಕೊರೋನಾ ಲಸಿಕೆಯನ್ನು ರಾಜಕೀಕರಣಗೊಳಿಸಿದ ಬಿಜೆಪಿ ಬಗ್ಗೆ ವಿಪಕ್ಷಗಳು ಟೀಕಿಸಿರುವ ಬೆನ್ನಲ್ಲೇ, ಬಿಜೆಪಿ ಪ್ರಣಾಳಿಕೆ ವಿರುದ್ಧ ಬಿಜೆಪಿ ನಾಯಕ ಎಚ್. ವಿಶ್ವನಾಥ್ ಕೂಡಾ ಗರಂ ಆಗಿದ್ದಾರೆ. 

ಇದನ್ನೂ ನೋಡಿ | ಬಿಹಾರದಲ್ಲಿ ಬಿಜೆಪಿ ಗೆದ್ದರೆ ಉಚಿತ ಕೊರೊನಾ ಲಸಿಕೆ: ವಿವಾದ ಗುರಿಯಾಯ್ತು ಬಿಜೆಪಿ ನಿಲುವು...

ಬಿಹಾರದಲ್ಲಿ ಗೆದ್ರೆ‌ ಉಚಿತ ಕೊರೋನಾ ಲಸಿಕೆ ಭರವಸೆ ಕೊಟ್ಟಿರುವ ಬಿಜೆಪಿ ನಿರ್ಧಾರವನ್ನು ಪಕ್ಷದ ನಾಯಕರು ಸ್ವಾಗತಿಸಿದ್ದರೆ, ಶಾಸಕ ಎಚ್‌. ವಿಶ್ವನಾಥ್ ಟೀಕಿಸಿರುವುದು ಪಕ್ಷಕ್ಕೆ ಮುಜುಗರ ಉಂಟುಮಾಡಿದೆ.  ಈ ಹಿಂದೆಯೂ ವಿಶ್ವನಾಥ್, ಟಿಪ್ಪು ಸುಲ್ತಾನ್‌ ಬಗ್ಗೆ ಹೊಗಳಿದ್ದು, ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು.