Jan 30, 2020, 7:05 PM IST
ನವದೆಹಲಿ, (ಜ.30): ಕಗ್ಗಂಟಾಗಿರುವ ರಾಜ್ಯ ಸಂಪುಟ ವಿಸ್ತರಣೆಗೆ ಒಪ್ಪಿಗೆ ತರಲು ಸಿಎಂ ಯಡಿಯೂಪರಪ್ ದೆಹಲಿಗೆ ಹಾರಿದ್ದು, ರಾಷ್ಟ್ರೀಯ ನಾಯಕರ ಜತೆಗೆ ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲಿದ್ದಾರೆ.
ಆದ್ರೆ, ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ಹೋಗುವ ಮುನ್ನವೇ ಕೆಲ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.