ಉದಯಪುರ ಫೈಲ್ಸ್‌ನಲ್ಲಿ ಅಡಗಿ ಕೂತಿದೆ "ಕೈ" ಫೀನಿಕ್ಸ್ ಮಂತ್ರ..!

May 17, 2022, 3:47 PM IST

ಬೆಂಗಳೂರು (ಮೇ. 17): ಮೋದಿ (Narendra Modi) ಅಶ್ವಮೇಧ ತಡೆಯುವ ನಿಟ್ಟಿನಲ್ಲಿ ಕಾಂಗ್ರೆಸ್ (Congress Party) ಪಕ್ಷ ನವ ಸಂಕಲ್ಪ ಮಾಡಿದೆ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್, ಪಂಚತಂತ್ರ, ವಿಜಯಮಂತ್ರ ಏನಿದು ಕೈ ತಂತ್ರ. ಮೋದಿಯನ್ನು ಮುಂದಿನ ಚುನಾವಣೆಯಲ್ಲಿ ಎದುರಿಸಲು ಈಗಾಗಲೇ ಕಾಂಗ್ರೆಸ್ ತನ್ನ ರಣತಂತ್ರಗಳನ್ನು ಸಿದ್ಧ ಮಾಡುತ್ತಿದೆ. 

ಮೋದಿ ರಣಾರ್ಭಟವನ್ನು ತಡೆಯಲು ಕೈ ಪಾಳೆಯದಲ್ಲಿ ಸಿದ್ಧವಾಗಿರೋ ರಣವ್ಯೂಹ ಎಂಥದ್ದು..? ದೇಶದ ದಶದಿಕ್ಕುಗಳಲ್ಲಿ ಮಕಾಡೆ ಮಲಗಿರೋ ಕಾಂಗ್ರೆಸ್, ಧೂಳಿನಿಂದೆದ್ದು ಬರುತ್ತಾ..? ಅಷ್ಟಕ್ಕೂ ಏನಿದು ಉದಯಪುರ (Udaipur ) ಫೈಲ್ಸ್..?

Congress Chintan Shivir ಅಲ್ಪಸಂಖ್ಯಾತರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡುತ್ತಿದೆ ಎಂದ ಸೋನಿಯಾ ಗಾಂಧಿ!

ದೇಶದ ಚುನಾವಣೆಗಳಲ್ಲಿ ಮಣ್ಣುಪಾಲಾಗಿರೋ ಪ್ರತಿಷ್ಠೆಯನ್ನು ಮರಳಿ ಪಡೆಯಲು ಕಾಂಗ್ರೆಸ್ ಶಪಥ ಮಾಡಿದೆ. 9 ವರ್ಷಗಳ ಬಳಿಕ ಕಾಂಗ್ರೆಸ್ ಕೊನೆಗೂ ನಿದ್ರೆಯಿಂದ ಎದ್ದಿದೆ. ಕೈಗೆ ಗತವೈಭವ ತಂದುಕೊಡುತ್ತಾ ಫೀನ್ಸಿಕ್ಸ್ ತಂತ್ರ ಎನ್ನುವುದನ್ನು ಕಾದು ನೋಡಬೇಕಿದೆ.