ಸರಿಯಾಗಿ ನಿದ್ರೆ ಬರ್ತಿಲ್ವಾ? ದುಡ್ಡಿನ ಸಮಸ್ಯೆಯೇ? ಬಿಲ್ವಪತ್ರೆ ಕೊಡುತ್ತೆ ಪರಿಹಾರ!

By Suvarna NewsFirst Published May 4, 2024, 5:53 PM IST
Highlights

ಶಿವನ ಪ್ರೀತಿಯ ವಸ್ತುಗಳಲ್ಲಿ ಬಿಲ್ವಪತ್ರೆ ಒಂದು. ಬಿಲ್ವಪತ್ರೆಯನ್ನು ದೇವರ ಪೂಜೆಗೆ ಮಾತ್ರವಲ್ಲದೆ ಔಷಧಿಯಾಗಿಯೂ ಬಳಕೆ ಮಾಡಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲೂ ಇದಕ್ಕೆ ಮಹತ್ವದ ಸ್ಥಾನವಿದ್ದು, ನಾನಾ ಸಮಸ್ಯೆಗೆ ಇದ್ರಿಂದ ಪರಿಹಾರ ಸಿಗುತ್ತದೆ. 
 

ಬಿಲ್ವಪತ್ರೆಯನ್ನು ಶಿವನಿಗೆ ಪ್ರಿಯವೆಂದು ಪರಿಗಣಿಸಲಾಗಿದೆ. ಬಿಲ್ವಪತ್ರೆ ಇಲ್ಲದೆ ಈಶ್ವರನ ಆರಾಧನೆ ಅಪೂರ್ಣವಾಗುತ್ತದೆ.  ಬಿಲ್ವ ಪತ್ರೆಗೆ ಧಾರ್ಮಿಕ ಮಹತ್ವವಿದೆ. ಬಿಲ್ವ ಪತ್ರೆಯನ್ನು ಶಿವನ ಸಂಕೇತವೆಂದು ಪರಿಗಣಿಸಲಾಗಿದೆ. ಬಿಲ್ವ ಪತ್ರೆಯ ಮೂರು ಎಲೆಗಳು ಶಿವನ ಮೂರು ಕಣ್ಣುಗಳ ಸಂಕೇತವೆಂದು ಹೇಳಲಾಗುತ್ತದೆ. ಬಿಲ್ವ ವೃಕ್ಷದ ಬುಡದಲ್ಲಿ ಶಿವಲಿಂಗವನ್ನು ಇಟ್ಟು ಪೂಜಿಸಿ ಅಭಿಷೇಕ ಮಾಡುವವರ ಮನೆಯಲ್ಲಿ ಸದಾ ಸಂತಸ ನೆಲೆಸಿರುತ್ತದೆ ಎಂದು ಜನರು ನಂಬುತ್ತಾರೆ. ಇದನ್ನು ಶಿವಪುರಾಣದಲ್ಲಿಯೂ ಉಲ್ಲೇಖಿಸಲಾಗಿದೆ.  ಜ್ಯೋತಿಷ್ಯ ಶಾಸ್ತ್ರದಲ್ಲೂ ಬಿಲ್ವ ಪತ್ರೆಗೆ ವಿಶೇಷ ಸ್ಥಾನವಿದೆ. ಬಿಲ್ವ ಪತ್ರೆಯನ್ನು ಪೂಜೆಯಲ್ಲಿ ಬಳಸುವುದರ ಜೊತೆಗೆ ತಲೆದಿಂಬಿನ ಕೆಳಗೆ ಇಟ್ಟು ಮಲಗುವುದು ತುಂಬಾ ಪ್ರಯೋಜನಕಾರಿ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.  

ಬಿಲ್ವಪತ್ರೆ (Bel Patra ) ಯನ್ನು ತಲೆದಿಂಬಿ (Pillow) ನ ಕೆಳಗಿಟ್ಟು ಮಲಗಿದರೆ ಏನು ಪ್ರಯೋಜನ? : 

ಬಲಗೊಳ್ಳುವ ಶುಕ್ರಗ್ರಹ (Venus) : ಬಿಲ್ವಪತ್ರೆಯನ್ನು ತಲೆದಿಂಬಿನ ಕೆಳಗಿಟ್ಟು ಮಲಗುವುದರಿಂದ ಶುಕ್ರಗ್ರಹ ಬಲ ಪಡೆಯುತ್ತದೆ. ಶಾಸ್ತ್ರದ ಪ್ರಕಾರ, ಬಿಲ್ವಪತ್ರೆಯಲ್ಲಿ ತಾಯಿ ಲಕ್ಷ್ಮಿ ನೆಲೆಸಿದ್ದಾಳೆ. ಜೊತೆಗೆ ಅದನ್ನು ಶುಕ್ರ ಗ್ರಹಕ್ಕೂ ಹೋಲಿಕೆ ಮಾಡಲಾಗುತ್ತದೆ. ನೀವು ಶುಕ್ರಗ್ರಹಕ್ಕೆ ಸಂಬಂಧಿಸಿದ ಸಮಸ್ಯೆ ಎದುರಿಸುತ್ತಿದ್ದರೆ ಬಿಲ್ವಪತ್ರೆಯನ್ನು ತಲೆದಿಂಬಿನ ಕೆಳಗಿಟ್ಟು ಮಲಗಿ.  ಹೀಗೆ ಮಾಡಿದಾಗ ಶುಭ ಮತ್ತು ಆಹ್ಲಾದಕರ ಜೀವನ ನಿಮ್ಮದಾಗುತ್ತದೆ.

ಈ ಅಕ್ಷರದ ಹೆಸರಿನ ಹುಡುಗರು ತುಂಬಾ ರೊಮ್ಯಾಂಟಿಕ್, ಅವರನ್ನು ಮದುವೆಯಾದರೆ ಸ್ವರ್ಗ

ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ : ಮೊದಲೇ ಹೇಳಿದಂತೆ ಬಿಲ್ವಪತ್ರೆಯಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ. ಈ ಬಿಲ್ವಪತ್ರೆಯನ್ನು ತಲೆ ದಿಂಬಿನ ಕೆಳಗಿಟ್ಟರೆ ಮನೆಯಲ್ಲಿ ಲಕ್ಷ್ಮಿ ನೆಲೆಯೂರುತ್ತಾಳೆ. ಮನೆಯಲ್ಲಿ ಹಣದ ಕೊರತೆ ಎಂದೂ ಕಾಡುವುದಿಲ್ಲ. ಆರ್ಥಿಕ ಸಮಸ್ಯೆಯಿಂದ ನಿಮಗೆ ಮುಕ್ತಿ ಸಿಗುತ್ತದೆ. ಯಾವುದೇ ಹಣಕಾಸಿನ ಸಮಸ್ಯೆ ತ್ವರಿತವಾಗಿ ಪರಿಹಾರ ಆಗ್ಬೇಕು ಎಂದಾದ್ರೆ ನೀವು ಬಿಲ್ವಪತ್ರೆಯನ್ನು ದಿಂಬಿನ ಕೆಳಗಿಡಿ.

ನಕಾರಾತ್ಮಕ ಶಕ್ತಿಯ ನಾಶ : ಬಿಲ್ವ ಪತ್ರೆಯಲ್ಲಿ ಶಿವನಿದ್ದಾನೆ. ಆತನ ಆಶೀರ್ವಾದ ನಿಮಗೆ ಸದಾ ಲಭ್ಯವಾಗುತ್ತದೆ. ಮನೆಯಲ್ಲಿ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ. ರಾತ್ರಿಯಲ್ಲಿ ಯಾವುದೇ ಸಮಸ್ಯೆ ಕಾಡುವುದಿಲ್ಲ. ದುಃಸ್ವಪ್ನದಿಂದ ಮುಕ್ತಿ ಸಿಗುತ್ತದೆ.

ಮಾನಸಿಕ ಆರೋಗ್ಯದಲ್ಲಿ ಸುಧಾರಣೆ :  ಒತ್ತಡ, ಅಶಾಂತಿ, ಬೆದರಿಕೆ, ಒಂಟಿತನ, ಹತಾಶೆ ಸೇರಿದಂತೆ ನಾನಾ ಮಾನಸಿಕ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ನೀವು ಬಿಲ್ವಪತ್ರೆ ಮೊರೆ ಹೋಗಬಹುದು. ಬಿಲ್ವಪತ್ರೆಯನ್ನು ತಲೆ ದಿಂಬಿನ ಕೆಳಗಿಟ್ಟು ಮಲಗಿದರೆ ಈ ಎಲ್ಲ ಮಾನಸಿಕ ಸಮಸ್ಯೆಯಿಂದ ನಿಮಗೆ ಪರಿಹಾರ ಸಿಗುತ್ತದೆ. 

ಕೆಟ್ಟ ದೃಷ್ಟಿಯಿಂದ ರಕ್ಷಣೆ : ಮನುಷ್ಯ ಏಳ್ಗೆ ಕಾಣುತ್ತಿದ್ದರೆ ಸ್ನೇಹಿತರು, ಆಪ್ತರು, ಅಪರಿಚಿತರ ಕಣ್ಣು ನಿಮ್ಮ ಮೇಲೆ ಬೀಳುತ್ತದೆ. ಈ ಕೆಟ್ಟ ದೃಷ್ಟಿಯಿಂದಾಗಿ ಅನಾರೋಗ್ಯ, ಅಶಾಂತಿ ಕಾಡುತ್ತದೆ. ಅಂಥವರು ಬಿಲ್ವ ಪತ್ರೆಯನ್ನು ತಲೆ ದಿಂಬಿನ ಕೆಳಗಿಟ್ಟು ಮಲಗಿ. 

ತಲೆದಿಂಬಿನ ಕೆಳಗೆ ಈ ವಸ್ತು ಇಟ್ಟು ಮಲಗಿ : 

* ತಲೆ ದಿಂಬಿನ ಕೆಳಗೆ ಭಗವದ್ಗೀತೆ ಅಥವಾ ಸುಂದರಕಾಂಡವನ್ನು ಇಟ್ಟುಕೊಂಡರೆ ಮನಸ್ಸು ಶಾಂತಗೊಳ್ಳುತ್ತದೆ. ಧನಾತ್ಮಕ ಶಕ್ತಿ ಹರಡುತ್ತದೆ. ಜೀವನದಲ್ಲಿ ಪ್ರಗತಿ ಸಾಧಿಸಬಹುದು. ಗುರು ಗ್ರಹ ಬಲಗೊಳ್ಳುತ್ತದೆ.

*  ನೀವು ರಾಹು ದೋಷಕ್ಕೆ ಒಳಗಾಗಿದ್ದರೆ ತಲೆದಿಂಬಿನ ಕೆಳಗೆ ಮೂಲಂಗಿಯನ್ನು ಇಟ್ಟು ಮಲಗಬೇಕು. ಮರುದಿನ ಅದನ್ನು ಶಿವಲಿಂಗಕ್ಕೆ ಅರ್ಪಿಸಬೇಕು. ಇದ್ರಿಂದ ರಾಹು ದೋಷ ನಿವಾರಣೆಯಾಗುತ್ತದೆ. 

* ಮಂಗಳವಾರ ರಾತ್ರಿ ಒಂದು ಬಟ್ಟೆಯಲ್ಲಿ ಹೆಸರು ಕಾಳನ್ನು ಕಟ್ಟಿ ಅದನ್ನು ತಲೆ ದಿಂಬಿನ ಕೆಳಗೆ ಇಟ್ಟು ಮಲಗಿ. ಮರುದಿನ ಅದನ್ನು ದುರ್ಗಾ ದೇವಿಗೆ ಅರ್ಪಿಸಿ. ಇದ್ರಿಂದ ವ್ಯಾಪಾರದಲ್ಲಿ ಅಭಿವೃದ್ಧಿಯಾಗುತ್ತದೆ. ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ.  

ಹುಟ್ಟಿನಿಂದಲೇ ಈ ರಾಶಿಗೆ ಲಕ್ಷಾಧಿಪತಿ ಯೋಗ, ನಿಮ್ಮ ರಾಶಿಯೂ ಇದೆಯೇ ನೋಡಿ

* ಸರಿಯಾಗಿ ನಿದ್ರೆ ಬರ್ತಿಲ್ಲ, ನಿದ್ರೆ ಮಧ್ಯೆ ಎಚ್ಚವಾಗ್ತಿದೆ, ಕೆಟ್ಟ ಸ್ವಪ್ನಗಳು ಬೀಳ್ತಿವೆ ಎಂದಾದ್ರೆ ಕಬ್ಬಿಣದ ಕೀಯನ್ನು ದಿಂಬಿನ ಕೆಳಗಿಟ್ಟು ಮಲಗಿ. ಇದ್ರಿಂದ ರಾಹು ಮತ್ತು ಕೇತುವಿನ ಕೆಟ್ಟ ಪ್ರಭಾವ ಕಡಿಮೆ ಆಗುತ್ತದೆ. ಜಾತಕದಲ್ಲಿ ಶನಿ, ಕೇತು ಮತ್ತು ರಾಹುವಿನ ದೋಷ ನಿವಾರಣೆಯಾಗುತ್ತದೆ. 

click me!