ಬೆಳಗಾವಿಗೆ ರಮೇಶ್ ಸಾಹುಕಾರ: ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ದೂರ..ದೂರ

Nov 13, 2019, 7:56 PM IST

ಬೆಂಗಳೂರು/ಬೆಳಗಾವಿ, [ನ.13]: ಬೆಳಗಾವಿ ಕಾಂಗ್ರೆಸ್ ನ ಭಿನ್ನಮತ ಸ್ಫೋಟಗೊಂಡು ಕೊನೆಗೆ ಏನಾಯ್ತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇದೀಗ ಬೆಳಗಾವಿ ಬಿಜೆಪಿಯಲ್ಲೂ ಸಹ ಕಾಂಗ್ರೆಸ್ ರೀತಿ ಅಸಮಾಧಾನ ಸ್ಫೋಟಗೊಳ್ಳುವ ಲಕ್ಷಣಗಳು ಕಾಣುತ್ತಿವೆ.

ಬೈ ಎಲೆಕ್ಷನ್ ಟಿಕೆಟ್ ಕುಸ್ತಿ: ಕಾಂಗ್ರೆಸ್ ಸೇರಲಿರವ ಕಾಗೆ ಕಾಯಲು ಕತ್ತಿ

ಈಗಾಗಲೇ ಕಾಗವಾಡ ಬೈ ಎಲೆಕ್ಷನ್ ಟಿಕೆಟ್ ಸಿಗದಿದ್ದಕ್ಕೆ ರಾಜು ಕಾಗೆ ಕಾಂಗ್ರೆಸ್ ಬಾಗಿಲಲ್ಲಿ ನಿಂತಿದ್ದಾರೆ. ಇದೀಗ ಬೆಳಗಾವಿಯ ಕಾಗವಾಡ, ಅಥಣಿ ಮತ್ತು ಗೋಕಾಕ್ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಎದುರಾಗಿದ್ದರೂ ಜಿಲ್ಲೆಯ ಹಿರಿಯ ಬಿಜೆಪಿ ನಾಯಕನಿಗೆ ಉಸ್ತುವಾರಿ ನೀಡಿಲ್ಲ. 

 ರಮೇಶ್ ಜಾರಕಿಹೊಳಿ ಎಂಟ್ರಿಯಿಂದಾಗಿ ಆ ಪ್ರಭಾವಿ ನಾಯಕನನ್ನು ಸೈಡ್ ಲೈನ್ ಮಾಡಲಾಗುತ್ತಿದ್ಯಾ,,? ದೂರ..ದೂರವಾಗುತ್ತಿರುವ ಆ ನಾಯಕ ಯಾರು...? ಸಂಪೂರ್ಣ ಮಾಹಿತಿಯನ್ನು ವಿಡಿಯೋನಲ್ಲಿ ನೋಡಿ..