'ಸಿಎಂ ಸೀಟು ಖಾಲಿಯಿಲ್ಲ, ಯತ್ನಾಳ್ರು ಹಗಲು ಕನಸು ಕಾಣ್ತಿದ್ದಾರೆ'

Oct 20, 2020, 4:56 PM IST

ಬೆಂಗಳೂರು (ಅ. 20): 'ಮಂಡ್ಯ, ಚಾಮರಾಜನಗರ ಕಡೆ ಯಾರು ಓಟು ಹಾಕ್ತಾರೆ? ಉತ್ತರ ಕರ್ನಾಟಕದ ಮಂದಿ ಓಟು ಹಾಕೋದ್ರಿಂದಲೇ ಬಿಜೆಪಿಯವರು ಮುಖ್ಯಮಂತ್ರಿಯಾಗ್ತಾರೆ. ನಮಗೆ ಅನುದಾನ ಮಾತ್ರ ಕೊಡಲ್ಲ. ಈ ವಿಚಾರವಾಗಿ ಯಡಿಯೂರಪ್ಪ ಜೊತೆ ಜಗಳ ಆಗಿದೆ. ನಾವೇನೂ ಸುಮ್ಮನೆ ಬಿಡಲ್ಲ. ಏನಾದರೂ ಮಾಡಿ ಅನುದಾನ ತರುತ್ತೇವೆ. ಬೆಂಗಳೂರು ಮಂದಿಯೂ ಬಂದು ನೋಡಬೇಕು. ಹಾಗೆ ವಿಜಯಪುರವನ್ನು ಮಾಡ್ತೀವಿ' ಎಂದು ಯತ್ನಾಳರು ಹೇಳಿದ್ದಾರೆ.

'ಉತ್ತರ ಕರ್ನಾಟಕದವರಿಂದಲೇ ಬಿಜೆಪಿಯವ್ರು ಸಿಎಂ ಆಗ್ತಾರೆ, ಬೇರೆ ಕಡೆ ಓಟು ಬೀಳಂಗಿಲ್ಲ'  

ಯತ್ನಾಳರ ಹೇಳಿಕೆಯನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ. ' ಯತ್ನಾಳರು ಹಗಲುಗನಸು ಕಾಣುತ್ತಿದ್ದಾರೆ ಎಂದು ರೇಣುಕಾಚಾರ್ಯ ಹೇಳಿದರೆ, ನಮ್ಮಲ್ಲಿ ನಾಯಕತ್ವ ಬದಲಾವಣೆ ಇಲ್ಲ' ಎಂದು ಕಟೀಲ್ ಹೇಳಿದ್ದಾರೆ.