ಬಿಜೆಪಿಯಿಂದ ಬಂಜಾರ ಸಮುದಾಯಕ್ಕೆ ಅನುದಾನ ಸಿಕ್ಕಿದೆ: ಬಿ.ಸಿ. ಪಾಟೀಲ್‌

Apr 24, 2023, 4:06 PM IST

ಹಾವೇರಿ: ವಿದಾನಸಭಾ ಚುನಾವಣೆ ಹಿನ್ನೆಲೆ ಹಿರೇಕೆರೂರು ಕ್ಷೇತ್ರದಲ್ಲಿ ಸಚಿವ ಬಿ.ಸಿ.ಪಾಟೀಲ್‌ ಅಬ್ಬರದ ಪ್ರಚಾರ ನಡೆಸುತ್ತಿದ್ದು, ನೂರಾರು ಬೆಂಬಲಿಗರ ಜೊತೆ ಮತವನ್ನು ಯಾಚಿಸಿದರು. ಚೂಗಚಿಕೊಪ್ಪ ಗ್ರಾಮದಲ್ಲಿ ಮತಬೇಟೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಚಿವರು, ನಾನು ಬಂಜಾರ ಸಮುದಾಯ ಭವನ ನಿರ್ಮಾಣ ಮಾಡಿಸಿಕೊಟ್ಟಿದ್ದೇನೆ. ಅಲ್ಲದೇ  ನಿಮ್ಮ ಸಮುದಾಯಕ್ಕೆ ಅನುದಾನವನ್ನು ಸಹ ಕೊಡಿಸಿದ್ದೇನೆ. ಜೊತೆಗೆ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿದ್ದೇನೆ. ಹಾಗಾಗಿ ಈ ಸಲ ಬಿಜೆಪಿಗೆ ಮತ ಹಾಕಿ ಎಂದು ಸಚಿವ ಬಿ.ಸಿ. ಪಾಟೀಲ್‌ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ: ಮನೆ ಮನೆಗೆ ತೆರಳಿ ಸುಧಾಕರ್‌ ಕ್ಯಾಂಪೇನ್‌: ಸ್ವಕ್ಷೇತ್ರದಲ್ಲಿ ಸಚಿವರ ಮತಬೇಟೆ