Panchanga: ಇಂದು ತಲಕಾವೇರಿಯಲ್ಲಿ ತೀರ್ಥೋದ್ಭವ, ಕಾವೇರಿ ಪೂಜೆ ಮಾಡಿ..

Oct 17, 2022, 9:25 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಆಶ್ವೀಜ ಮಾಸ, ಕೃಷ್ಣ ಪಕ್ಷ, ಸೋಮವಾರ, ಸಪ್ತಮಿ ತಿಥಿ,ಪುನರ್ವಸು ನಕ್ಷತ್ರ.
ಕಾವೇರಿ ಉಗಮ ಸ್ಥಾನ ಭಾಗಮಂಡಲದಲ್ಲಿ ಈ ಮಾಸದಲ್ಲಿ ತೀರ್ಥೋದ್ಭವ ಆಗುವುದು. ಈ ದಿನ ರಾತ್ರಿ 7.22ರ ವೇಳೆ ಕಾವೇರಿ ತೀರ್ಥ ಉದ್ಭವವಾಗುತ್ತದೆ. ಬೆಂಗಳೂರು, ಮಂಡ್ಯ ಮುಂತಾದೆಡೆಯ ಜನತೆ ಕೂಡಾ ಕಾವೇರಿ ನೀರನ್ನೇ ಪ್ರತಿದಿನ ಬಳಸುವುದು.

ಅಕ್ಟೋಬರ್ 25ಕ್ಕೆ ಸೂರ್ಯಗ್ರಹಣ; ಸೂತಕ ಸಮಯವೇನು?

ಹೀಗಾಗಿ, ಕೋಟ್ಯಂತರ ಜನರ ಜೀವಜಲವಾಗಿರುವ ಕಾವೇರಿಯನ್ನು ಇಂದು ಪೂಜಿಸುವುದು, ಗಂಗಾಪೂಜೆ ಮಾಡುವುದು ಉತ್ತಮವಾಗಿದೆ. ಈ ಬಗ್ಗೆ ವಿವರ ತಿಳಿಸುತ್ತಾರೆ ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳು. ಜೊತೆಗೆ ಕಾವೇರಿ ನದಿಯ ಪೌರಾಣಿಕ ಉಲ್ಲೇಖಗಳು, ಇಂದಿನ ದ್ವಾದಶ ರಾಶಿಗಳ ಭವಿಷ್ಯವನ್ನೂ ತಿಳಿಸಿದ್ದಾರೆ.