Panchanga: ಕಾರ್ತಿಕ ಸೋಮವಾರದಲ್ಲಿ ಶಿವನಿಗೆ ದೀಪಗಳನ್ನು ಏಕೆ ಬೆಳಗುತ್ತಾರೆ?

Nov 21, 2022, 9:05 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು, ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸೋಮವಾರ, ದ್ವಾದಶಿ ತಿಥಿ, ಚಿತ್ರಾ ನಕ್ಷತ್ರ. ಈ ದಿವಸ ಕಡೆಯ ಕಾರ್ತಿಕ ಸೋಮವಾರವಾಗಿದ್ದು, ಕಾರ್ತಿಕ ಮಾಸವೇ ಶಿವನ ಮಾಸ ಅಂತಾ ಕರೆಯಲಾಗುತ್ತದೆ. ಕಾರ್ತಿಕ ಮಾಸದಲ್ಲಿ ಹರಿಯುನ ನದಿಗಳಲ್ಲಿ ಚೈತನ್ಯ ಶಕ್ತಿಯಿರುತ್ತದೆ. ಆರೋಗ್ಯವನ್ನು ಸಂಪೂರ್ಣವಾಗಿ ಕೊಡಮಾಡುವ ಶಕ್ತಿ ನದಿಗಳ ನೀರಿನಲ್ಲಿರುತ್ತದೆ. ಹೀಗಾಗಿ ಕಾರ್ತಿಕ ಸ್ನಾನಕ್ಕೆ ಹೆಚ್ಚಿನ ಮಹತ್ವವಿರುತ್ತದೆ.  ಕಡೆ ಕಾರ್ತಿಕ ಸೋಮವಾರದಲ್ಲಿ ಶಿವನಿಗೆ ದೀಪಗಳನ್ನು ಏಕೆ ಬೆಳಗುತ್ತಾರೆ ಎಂಬ ಸಂಪೂರ್ಣ ಮಾಹಿತಿಯ ಜೊತೆಗೆ ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.