Panchanga: ಇಂದು ಏಕಾದಶಿ, ಹರಿನಾಮ ಸ್ಮರಣೆ ಮಾಡಿ, ಕೋರಿಕೆಗಳು ಈಡೇರುವವು

Nov 30, 2021, 8:26 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ನಾಮ ಸಂವತ್ಸರ, ದಕ್ಷಿಣಾಯನ, ಶರದೃತು, ಕಾರ್ತೀಕ ಮಾಸ, ಕೃಷ್ಣ ಪಕ್ಷ, ಏಕಾದಶಿ ತಿಥಿ, ಹಸ್ತ ನಕ್ಷತ್ರ, ಇಂದು ಮಂಗಳವಾರ. ಇಂದು ಏಕಾದಶಿ ಇರುವುದರಿಂದ ಹರಿನಾಮ ಸ್ಮರಣೆಯಿಂದ ಭಗವಂತನ ಅನುಗ್ರಹವಾಗುವುದು. ಮಂಗಳವಾರ ಆ ತಾಯಿ ಭಗವತಿಯ ಪ್ರಾರ್ಥನೆಯನ್ನೂ ಮಾಡಬಹುದು. ಜಗನ್ಮಾತೆ ನಮ್ಮ ಕೋರಿಕೆಗಳನ್ನು ಅನುಗ್ರಹಿಸುತ್ತಾಳೆ.