ಪಂಚಾಂಗ: ಪಿತೃಪಕ್ಷ, ಈ ಮಾಸದಲ್ಲಿ ಪಿತೃಗಳಿಗೆ ತಪ್ಪದೇ ಕಾರ್ಯಗಳನ್ನು ಮಾಡಬೇಕು

Sep 28, 2021, 8:41 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ,  ಸಪ್ತಮಿ ತಿಥಿ, ಮೃಗಶಿರ ನಕ್ಷತ್ರ, ಇಂದು ಮಂಗಳವಾರ. ಈಗ ಪಿತೃಪಕ್ಷ ನಡೆಯುತ್ತಿದೆ. ಈ ಸಪ್ತಮಿಯ ದಿನದಂದು ಯಾರಾದರೂ ಮೃತರಾಗಿದ್ದರೆ, ಅವರಿಗೆ ಪಿತೃಕಾರ್ಯಗಳನ್ನು ಮಾಡುವುದರಿಂದ ವಿಶೇಷವಾದ ಅನುಗ್ರಹ ಪ್ರಾಪ್ತಿಯಾಗುತ್ತದೆ.