Panchanga: ಇಂದು ಚಿತ್ರದುರ್ಗದ ಬೆಳೆಗೆರೆ ಲಕ್ಷ್ಮೀ ರಂಗನಾಥ ದೇವಸ್ಥಾನದ ಪ್ರತಿಷ್ಠಾಪನಾ ಮಹೋತ್ಸವ

Jun 17, 2022, 8:31 AM IST

ಓದುಗರೆಲ್ಲರಿಗೂ ಶುಭೋದಯ, ಶುಭ ಬೆಳಗು. ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಕೃಷ್ಣ ಪಕ್ಷ, ತೃತೀಯ ತಿಥಿ, ಉತ್ತರಾಷಾಢ ನಕ್ಷತ್ರ, ಇಂದು ಶುಕ್ರವಾರ. ಉತ್ತರಷಾಢ, ತೃತೀಯ ತಿಥಿ ದೇವತಾ ಆರಾಧನೆಗೆ ಪ್ರಶಸ್ತವಾದ ಕಾಲ. ಚಿತ್ರದುರ್ಗದ ಬೆಳೆಗೆರೆ ಎಂಬ ಊರಿನಲ್ಲಿ ಇಂದು ಲಕ್ಷ್ಮೀ ರಂಗನಾಥ ದೇವಸ್ಥಾನದಲ್ಲಿ ಪ್ರತಿಷ್ಠಾಪನಾ ಮಹೊತ್ಸವ ನೆರವೇರುತ್ತಿದೆ, ಸಮೀಪ ಇದ್ದವರು ಬಂದು ಭಾಗವಹಿಸಿ ಸಾಕ್ಷಾತ್ ಲಕ್ಷ್ಮೀ ವಿಷ್ಣುವಿನ ಅನುಗ್ರಹಕ್ಕೆ ಪಾತ್ರರಾಗಬಹುದು.