ಸಾವನ್ನಪ್ಪಿರೋ ಸಿಹಿ ಆತ್ಮ ಆಗಿ ಮನೆಗೆ ಎಂಟ್ರಿ ಕೊಟ್ಟಿದ್ದಾಳೆ, ಆದ್ರೆ ಅಲ್ಲಿ ಯಾಕೆ ತನ್ನ ಫೋಟೊಗೆ ಹಾರ ಹಾಕಿದ್ದಾರೆ, ಯಾಕೆ ಯಾರಿಗೂ ನನ್ನನ್ನು ನೋಡೋದಕ್ಕೆ ಸಾಧ್ಯ ಆಗ್ತಿಲ್ಲ, ಅಪ್ಪನಿಗೆ ಎರಡನೇ ಮದುವೆ ಮಾಡೋ ಬಗ್ಗೆ ಭಾರ್ಗವಿ ಸೂರ್ಯಪ್ರಕಾಶ್ ಜೊತೆ ಮಾತಾಡ್ತಿರೋದು ಎಲ್ಲವೂ ಸಿಹಿಗೆ ಗೊತ್ತಾಗಿ, ಅದನ್ನೆ ಯೋಚನೆ ಮಾಡುತ್ತಾ, ಅಮ್ಮನಿಗೆ ಹೇಗಾದ್ರು ಮಾಡಿ ನಾನು ಕಾಣಿಸ್ಕೋಬೇಕು ಎಂದು ಯೋಚ್ನೆ ಮಾಡ್ತಾ ರಸ್ತೆ ಹೋಗ್ತಿರ್ಬೇಕಾದ್ರೆ, ಅಲ್ಲಿ ಸಿಹಿಗೆ ತನ್ನ ಹಾಗೇ ಇರುವ ಮತ್ತೊಬ್ಬ ಹುಡುಗಿಯ ಪರಿಚಯ ಆಗುತ್ತೆ.