Panchanga: ಇಂದು ಗುರು ಪೂರ್ಣಿಮೆ, ಅರಿವಿನ ಆದಿಗುರು ವೇದ ವ್ಯಾಸ

Jul 13, 2022, 8:42 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ಪೂರ್ಣಿಮಾ ತಿಥಿ, ಪೂರ್ವಾಷಾಢ ನಕ್ಷತ್ರ, ಇಂದು ಬುಧವಾರ. ಆಷಾಢ ಪೂರ್ಣಿಮಕ್ಕೆ ಗುರು ಪೂರ್ಣಿಮಾ, ವ್ಯಾಸ ಪೂರ್ಣಿಮಾ ಎಂದು ಕರೆಯಲಾಗುತ್ತದೆ. ನಮ್ಮ ಜೀವನಕ್ಕೆ ಪೂರ್ಣತೆ ತಂದುಕೊಡುವವರು ಯಾರಾದರೂ ಇದ್ದರೆ ಅದು ಗುರು. ಗುರುವಿನಿಂದ ಬ್ರಹ್ಮಾನಂದ ಸಾಧ್ಯ. ಗುರುಶ್ರೇಷ್ಠರಲ್ಲಿ ವ್ಯಾಸರ ಕೊಡುಗೆ, ಅವರ ಕೊಡುಗೆ ಸ್ಮರಿಸಿಕೊಂಡರೆ ಗುರು ಪೂರ್ಣಿಮೆಗೊಂದು ಅರ್ಥ ಬರುತ್ತದೆ.