Panchanga: ಆರೋಗ್ಯ ವೃದ್ಧಿಯಾಗಬೇಕೆಂದರೆ ಸೂರ್ಯನಿಗೆ ಈ ಅಷ್ಟದ್ರವ್ಯಗಳನ್ನು ಸಮರ್ಪಿಸಿ

Aug 7, 2022, 8:35 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ, ಅನೂರಾಧಾ ನಕ್ಷತ್ರ, ಇಂದು ಭಾನುವಾರ. ಇಂದು ಭಾನುವಾರ ಆದ್ದರಿಂದ ಸೂರ್ಯನ ಪ್ರಾರ್ಥನೆಗೆ ವಿಶೇಷ ಮಹತ್ವವಿದೆ. ಅಷ್ಟ ವಿಶೇಷ ದ್ರವ್ಯಗಳನ್ನು ಸಮರ್ಪಣೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಅದಕ್ಕೆ ಆರೋಗ್ಯಂ ಭಾಸ್ಕರಾದಿಚ್ಚೇತ್ ಎಂದು ಉಲ್ಲೇಖಿಸುತ್ತಾರೆ.