ಪಂಚಾಂಗ: ಇಂದು ಆಶ್ಲೇಷ ನಕ್ಷತ್ರ, ನಾಗಪ್ಪನಿಗೆ ಎಳನೀರು ಅಭಿಷೇಕದಿಂದ ಒಳಿತಾಗುವುದು

Sep 5, 2021, 8:37 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಆಶ್ಲೇಷ ನಕ್ಷತ್ರ, ಇಂದು ಭಾನುವಾರ. ಇಂದು ಆಶ್ಲೇಷ ನಕ್ಷತ್ರ ಬಂದಿದ್ದು, ನಾಗಾರಾಧನೆ ಮಾಡಿದರೆ ಖಂಡಿತಾ ಅನುಕೂಲವಾಗುವುದು. ಮತ್ತು ಈ ದಿನ ಕುಜ ಕನ್ಯಾ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಶುಕ್ರನ ಸ್ಥಾನದಲ್ಲಿಯೂ ಬದಲಾವಣೆಯಾಗಲಿದೆ. 

ದಿನ ಭವಿಷ್ಯ: ಕನ್ಯಾ ರಾಶಿಯವರು ಮಾತು ಹಾಗೂ ಹಣಕಾಸಿನ ವಿಚಾರದಲ್ಲಿ ಎಚ್ಚರದಿಂದಿರಿ!