Panchanga: ದ್ವಿತೀಯ ತಿಥಿ, ವಿ‍ಷ್ಣುವಿನ ಆರಾಧನೆಯಿಂದ ಕಷ್ಟಗಳೆಲ್ಲಾ ದೂರವಾಗುವುದು

Jun 1, 2022, 8:24 AM IST

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶುಭಕೃತ್ ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದ್ವಿತೀಯ ತಿಥಿ, ಮೃಗಶಿರ ನಕ್ಷತ್ರ, ಇಂದು ಬುಧವಾರ. ದ್ವಿತೀಯ ತಿಥಿ ಮಂಗಳಕರವಾಗಿದ್ದು, ಈ ದಿನ ವಿಷ್ಣುವಿನ ಆರಾಧನೆ ಮಾಡಬೇಕು. ವಿಷ್ಣು ಅಲಂಕಾರ ಪ್ರಿಯ. ಆತನಿಗೆ ಸುಗಂಧಪುಷ್ಪಗಳನ್ನು ಅರ್ಪಿಸುವುದರಿಂದ ಸಂತುಷ್ಟನಾಗುತ್ತಾನೆ.