ಬಿಜೆಪಿ ಸರ್ಕಾರ ರಚಿಸಲಿ, ನಾವು ವಿಪಕ್ಷದಲ್ಲಿರೋಣ: ಸಿದ್ದರಾಮಯ್ಯ

Jul 7, 2019, 3:44 PM IST

ಅತೃಪ್ತ ಶಾಸಕರ ರಾಜೀನಾಮೆ ಬಗ್ಗೆ ಸಿದ್ದರಾಮಯ್ಯ ಹಾಗೂ ವೇಣು ಗೋಪಾಲ್ ಖಾಸಗಿ ಹೊಟೇಲ್ ನಲ್ಲಿ ಮಾತುಕತೆ ನಡೆಸಿದ್ದಾರೆ. ಜೆಡಿೆಸ್ ಸಹವಾಸವೇ ಬೇಡ. ಜೆಡಿಎಸ್ ಜೊತೆ ಮೈತ್ರಿಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿದೆ.  ಹೊಸ ಚುನಾವಣೆ ನಡೆಸೋಣ. ಅತೃಪ್ತ ಶಾಸಕರನ್ನು ವಾಪಸ್ ಕರೆತರೋದು ಸಾಧ್ಯವಿಲ್ಲ. ಪಕ್ಷ ಸಂಘಟಿಸೋಣ. ರಾಜ್ಯದಲ್ಲಿ ಭವಿಷ್ಯವಿದೆ. ಬಿಜೆಪಿ ಸರ್ಕಾರ ರಚಿಸಲಿ. ನಾವು ವಿಪಕ್ಷದಲ್ಲಿ ಇರೋಣ ಎಂದು ವೇಣುಗೋಪಾಲ್ ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.