ಡಿಕೆಶಿಗೆ ಅವಮಾನ ಸಹಿಸಲ್ಲ; ಟ್ರಬಲ್ ಶೂಟರ್ ಹೊಗಳಿದ ಬಂಡಾಯ ಶಾಸಕ!

Jul 10, 2019, 2:16 PM IST

ಮುಂಬೈ (ಜು.10): ರಾಜಕೀಯವೇ ಹಾಗೇ. ಯಾರು? ಹೇಗೆ? ಯಾವಾಗ? ಏನ್ಮಾಡ್ತಾರೆ? ಏನು ಹೇಳ್ತಾರೆ? ಎಂದು ಹೇಳಕ್ಕಾಗಲ್ಲ. ಮುಂಬೈ ಹೋಟೆಲ್ ನಲ್ಲಿ ಬೀಡು ಬಿಟ್ಟಿರುವ ಬಂಡಾಯ ಶಾಸಕರನ್ನು ಭೇಟಿಯಾಗಲು ಡಿ.ಕೆ. ಶಿವಕುಮಾರ್ ಹಠ ಹಿಡಿದು ಕೂತಿದ್ದಾರೆ. ಡಿಕೆಶಿಯವರನ್ನು ಭೇಟಿಯಾಗಲ್ಲ ಎಂದು ಬಂಡಾಯ ಶಾಸಕರು ಖಡಕ್ ಮಾತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ಕೊಟ್ಟ ಬಂಡಾಯ ಶಾಸಕರೊಬ್ಬರು, ಡಿಕೆಶಿಗೆ ಆಗುವ ಅವಮಾನ ಸಹಿಸಲ್ಲ, ಅವರಿಂದಾಗಿಯೇ ನಾವು ಬೆಳೆದಿದ್ದೇವೆ,  ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.