ಮುಂದಿನ ದಾಳ ಉರುಳಿಸಲು 14 ಅನರ್ಹ ಶಾಸಕರು ರೆಡಿ!

Aug 1, 2019, 1:28 PM IST

ಬೆಂಗಳೂರು (ಆ.01): ಅನರ್ಹತೆಗೊಳಗಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಶಾಸಕರು ಮುಂದಿನ ಹೆಜ್ಜೆಯಿಡಲು ನಿರ್ಧರಿಸಿದ್ದಾರೆ. ಈಗಾಗಲೇ ಗೋಕಾಕ್, ಅಥಣಿ ಮತ್ತು ರಾಣೆಬೆನ್ನೂರಿನ ಅನರ್ಹ ಶಾಸಕರಾದ  ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್. ಶಂಕರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇನ್ನುಳಿದ 14 ಅನರ್ಹರು ಕೂಡಾ ಇಂದು ಸರ್ವೋಚ್ಛ ನ್ಯಾಯಲಯದ ಕದ ತಟ್ಟಲು ಮುಂದಾಗಿದ್ಧಾರೆ.