May 9, 2019, 6:37 PM IST
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು, ಇದೀಗ ಎದುರಾಗಿರುವ ಚಿಂಚೊಳಿ ಮತ್ತು ಕುಂದಗೋಳ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಐಕ್ಯತೆ ಪ್ರದರ್ಶಿಸುತ್ತಿಲ್ಲ. ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನ ಕಣಕ್ಕಿಳಿಸದೆ ದೋಸ್ತಿ ಪಕ್ಷಕ್ಕೆ ಸಾಥ್ ನೀಡುವುದಾಗಿ ದೇವೇಗೌಡ್ರು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು. ಆದ್ರೆ ಅದು ಬರಿ ಹೇಳಿಕೆಗಷ್ಟೇ ಸೀಮಿತವಾಗಿಯ್ತೆ ಎನ್ನುವ ಪ್ರಶ್ನೆ ಎದುರಾಗಿದೆ.