ಬರದ ನಾಡಿನಲ್ಲಿ ಹನಿ ನೀರಿಗೂ ಹಾಹಾಕಾರ, ಅಲೆದಾಡಿ ತಂದಿರುವ ನೀರಿನ ತೊಟ್ಟಿಗೆ ಬೀಗ

Apr 30, 2019, 5:04 PM IST

ವಿಜಯಪುರ[ಏ.30]: ಗೊಮ್ಮಟನಗರಿ ವಿಜಯಪುರದಲ್ಲೂ ನೀರಿಗೆ ಹಾಹಾಕಾರ ಮುಗಿಲು ಮುಟ್ಟಿದೆ. ಆದ್ರೆ ವಿಪರ್ಯಾಸ ಅಂದ್ರೆ  ಕಷ್ಟ ಪಟ್ಟು ಹತ್ತಾರು ಮೈಲಿ ದೂರದಿಂದ ತಂದ ನೀರನ್ನು ಕಳ್ಳರಿಂದ ಕಾಪಾಡುವ ಪರಿಸ್ಥಿತಿ ಎದುರಾಗಿದೆ. ತಿಕೋಟ ತಾಲೂಕಿನ ಕಳ್ಳಕವಟಗಿ ತಾಂಡಾದ ಜನರು ತಮ್ಮ ಮನೆ ಮುಂದಿನ ನೀರಿನ ಬ್ಯಾರಲ್‌ ಗಳಿಗೆ ಬೀಗ ಹಾಕಿ ಕಳ್ಳರಿಂದ ನೀರನ್ನು ರಕ್ಷಿಸುತ್ತಿದ್ದಾರೆ. ಇದು ವಿಜಯಪುರ ಜಿಲ್ಲೆಯಲ್ಲಿ ಉಂಟಾಗಿರುವ ಬರದ ಭೀಕರತೆಯ ಸತ್ಯದರ್ಶನ ಮಾಡಿಸ್ತಿದೆ.