ಮುಸಲ್ಮಾನರ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಿದ್ಯಾಕೆ? ಸಿದ್ದರಾಮಯ್ಯ ಪ್ರಶ್ನೆ

Aug 16, 2022, 5:27 PM IST

ಶಿವಮೊಗ್ಗದಲ್ಲಿ ಸಾವರ್ಕರ್‌ ಫೋಟೋ ತೆರವು ವಿಚಾರದಲ್ಲಿ ಗಲಾಟೆ ನಡೆದಿದ್ದು, ಈ ಸಂಬಂಧ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಸಾವರ್ಕರ್‌ ಫೋಟೋವನ್ನು ಮುಸಲ್ಮಾನರ ಏರಿಯಾದಲ್ಲಿ ಯಾಕೆ ಹಾಕಬೇಕಿತ್ತು ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಯವರು ಯಾರ ಫೋಟೋನಾದರೂ ಹಾಕಿಕೊಳ್ಳಲಿ. ಆದರೆ, ಮುಸಲ್ಮಾನರ ಏರಿಯಾದಲ್ಲೇ ಯಾಕೆ ಹಾಕಬೇಕಿತ್ತು ಎಂದೂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಲದೆ, ಟಿಪ್ಪು ಫೋಟೋ ಹಾಕಲು ಬಿಜೆಪಿಯವರು ಯಾಕೆ ಬೇಡ ಅಂತಾರೆ. ಸಾವರ್ಕರ್ ಫೋಟೋ ಹಾಕಿದ್ರೆ, ಟಿಪ್ಪು ಫೋಟೋವನ್ನೂ ಹಾಕ್ಬೋದಲ್ವ ಎಂದೂ ಮಾಜಿ ಸಿಎಂ ಸಿದ್ದರಾಮಯ್ಯ ಕೇಳಿದ್ದಾರೆ.