ಪ್ರಥಮ ಫಲ ಬಿಟ್ಟಿರುವ ಕಲ್ಪವೃಕ್ಷಕ್ಕೆ ಸೀಮಂತ ಭಾಗ್ಯ; ವಿಜಯಪುರದಲ್ಲಿ ವಿಶೇಷ ಆಚರಣೆ

Dec 3, 2020, 9:29 AM IST

ವಿಜಯಪುರ  (ಡಿ. 03): ಪ್ರಥಮ ಫಲವನ್ನು ದೇವರಿಗೆ ನೈವೇದ್ಯ ಮಾಡುವುದನ್ನು ನೋಡಿದ್ದೇವೆ. ಆದರೆ ಪ್ರಥಮ ಫಲ ಬಿಟ್ಟಿರುವ ತೆಂಗಿನ ಮರಕ್ಕೆ ಸೀಮಂತ ಮಾಡೋದನ್ನ ನೋಡಿದ್ದೀರಾ? ಇಂತಹದ್ದೊಂದು ವಿಶೇಷ ಅಚರಣೆಗೆ ಗುಮ್ಮಟ ನಗರಿ ವಿಜಯಪುರ ಸಾಕ್ಷಿಯಾಗಿದೆ. 

ಸ್ಮಶಾನದ ಬಳಿ ಖಾರದಪುಡಿ ಚೆಲ್ಲಿದ್ದ ಒಂಟಿ ಕಾರು ಬಿಚ್ಚಿಟ್ಟ 30 ಕೋಟಿ ರಹಸ್ಯ

ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರಥಮ ಫಲ ಬಿಟ್ಟಿರುವ ತೆಂಗಿನಮರಕ್ಕೆ ಸೀಮಂತ ಕಾರ್ಯ ನೆರವೇರಿಸಲಾಯಿತು. ಪರಸ್ಪರ ಗಂಡು- ಹೆಣ್ಣಿನ ಕಡೆಯವರು ಮರಕ್ಕೆ ಆರತಿ ಮಾಡಿದರು. ಮಹಿಳೆಯರಿಗೆ ಉಡಿ ತುಂಬಿಸಲಾಯಿತು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.