ಗುಬ್ಬಲಾಳ ಕೆರೆ ಪರಿಶೀಲನೆ ಮಾಡಿದ ಕೇಂದ್ರಸಚಿವ ರಾಜೀವ್‌ ಚಂದ್ರಶೇಖರ್

Apr 12, 2022, 1:37 PM IST

ಬೆಂಗಳೂರು (ಏ. 12): ಕನಕಪುರ ರಸ್ತೆಯ ಗುಬ್ಬಲಾಳ ಕೆರೆಗೆ ಕೇಂದ್ರ ಎಲೆಕ್ಟ್ರಾನಿಕ್‌ ಮತ್ತು ಐಟಿ ಸಚಿವ ರಾಜೀವ್‌ ಚಂದ್ರಶೇಖರ್‌ ಭೇಟಿ ನೀಡಿದ್ದಾರೆ. ಮೂರುವರೆ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೆರೆಯನ್ನು ಸಚಿವರು ಪರೀಶಿಲಿಸಿದ್ದಾರೆ. 2021ರಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿತ್ತು.

ಇದನ್ನೂ ಓದಿ: Bengaluru: ಐಟಿ ಕ್ಷೇತ್ರದಲ್ಲಿ ಭಾರತಕ್ಕೆ ವಿಫುಲ ಅವಕಾಶ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಶಾಸಕ ಎಂ ಕೃಷ್ಣಪ್ಪ, ಪಾಲಿಕೆ ಮಾಜಿ ಸದಸ್ಯ ಹನುಮಂತ್ತಪ್ಪ ಹಾಗೂ ಮುಖ್ಯ ಎಂಜಿನಿಯರ್‌ ಹರಿದಾಸ್‌ ಸೇರಿದಂತೆ  ಹಲವು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ವೇಳೆ ಸಚಿವ್‌ ರಾಜೀವ್‌ ಚಂದ್ರಶೇಕರ್‌ ಅಧಿಕಾರಿಗಳ ಬಳಿ ಕೆರೆ ಅಭಿವೃದ್ಧಿಯ ಕುರಿತು ಮಾಹಿತಿ ಪಡೆದುಕೊಂಡರು.