
ನವದೆಹಲಿ: ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಸಾಕಾರ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮೂರು ಮಸೂದೆಗಳನ್ನು ಮಂಡನೆ ಮಾಡುವ ನಿರೀಕ್ಷೆ ಇದೆ. ಈ ಪೈಕಿ 2 ಸಾಂವಿಧಾನಿಕ ತಿದ್ದುಪಡಿ ವಿಧೇಯಕಗಳಾಗಿವೆ. ಅದರಲ್ಲಿ ಒಂದಕ್ಕೆ ಅರ್ಧದಷ್ಟು ರಾಜ್ಯಗಳ ಅನುಮತಿ ಕಡ್ಡಾಯವಾಗಿದೆ.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯನ್ನು ಒಟ್ಟಿಗೆ ನಡೆಸುವ ಸಂಬಂಧ ಸಂವಿಧಾನದ ಸೆಕ್ಷನ್ 82 ಎಗೆ ತಿದ್ದುಪಡಿ ತರುವುದು ಮೊದಲ ಮಸೂದೆಯಾಗಿರಲಿದೆ. ಅದೇ ಮಸೂದೆಯ ಮೂಲಕ ಸಂವಿಧಾನದ 83(2)ಕ್ಕೂ ತಿದ್ದುಪಡಿ ತರಲಾಗುತ್ತದೆ. ಈ ವಿಧೇಯಕಕ್ಕೆ ರಾಜ್ಯಗಳ ಅನುಮತಿ ಬೇಕಾಗಿರುವುದಿಲ್ಲ.
ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಜತೆಗೇ ಸ್ಥಳೀಯ ಸಂಸ್ಥೆಗಳನ್ನು ನಡೆಸುವ ಸಂಬಂಧ 2ನೇ ವಿಧೇಯಕವನ್ನು ಸರ್ಕಾರ ಮಂಡನೆ ಮಾಡುವ ಅಗತ್ಯವಿದೆ. ಆ ಮಸೂದೆಗೆ ಅರ್ಧದಷ್ಟು ರಾಜ್ಯಗಳ ಒಪ್ಪಿಗೆ ಬೇಕಾಗುತ್ತದೆ.
ಮನ್ ಕೀ ಬಾತ್ಗೆ ದಶಕದ ಸಂಭ್ರಮ: ಭಾವುಕರಾದ ಪ್ರಧಾನಿ ಮೋದಿ
ಕೇಂದ್ರಾಡಳಿತ ಪ್ರದೇಶವಾಗಿದ್ದರೂ ವಿಧಾನಸಭೆಗಳನ್ನು ಹೊಂದಿರುವ ಪುದುಚೇರಿ, ದೆಹಲಿ ಹಾಗೂ ಜಮ್ಮು-ಕಾಶ್ಮೀರಗಳ ಅಸೆಂಬ್ಲಿ ಅವಧಿಯನ್ನು ದೇಶದ ಇತರೆ ವಿಧಾನಸಭೆ ಹಾಗೂ ಲೋಕಸಭೆ ಜತೆ ಸರಿಹೊಂದಿಸಲು ಮೂರನೇ ತಿದ್ದುಪಡಿಯನ್ನು ಮಂಡಿಸಲಾಗುತ್ತದೆ. ಇದಕ್ಕೆ ಸಂವಿಧಾನದಲ್ಲಿ ಯಾವುದೇ ಬದಲಾವಣೆ ತರಬೇಕಾಗಿರುವುದಿಲ್ಲ. ರಾಜ್ಯಗಳ ಅನುಮತಿಯೂ ಬೇಕಾಗಿರುವುದಿಲ್ಲ.
ಮೋದಿಯನ್ನ ಇಳಿಸೋವರೆಗೆ ನಾನು ಸಾಯೊಲ್ಲ: ಪ್ರಧಾನಿ ವಿರುದ್ಧ ಖರ್ಗೆ ಗುಡುಗು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ