ಒತ್ತಡದ ನಡುವೆ ಕ್ಷೇತ್ರ ರೌಂಡ್ಸ್; ಡಾಕ್ಟ್ರಿಗೇ ರಮೇಶ್ ಕುಮಾರ್ ಇಂಜೆಕ್ಷನ್!

Jul 16, 2019, 7:02 PM IST

ಕೋಲಾರ (ಜು.16): ರಾಜಕೀಯ ಒತ್ತಡದ ನಡುವೆ ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ಸ್ಪೀಕರ್ ರಮೇಶ್ ಕುಮಾರ್ ಭೇಟಿ ನೀಡಿದರು. ಆಸ್ಪತ್ರೆಯಲ್ಲಿ ವೈದ್ಯಕೀಯ ಉಪಕರಣಗಳ ಕೊರತೆಯನ್ನು ಕಂಡು ಗರಂ ಆದ ರಮೇಶ್ ಕುಮಾರ್, ಜಿಲ್ಲಾ ವೈದ್ಯಾಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗದುಕೊಂಡರು.

ಉಪಕರಣಗಳನ್ನು ಇನ್ನು ಏಕೆ ತರಸಿಕೊಂಡಿಲ್ಲ? ಬಡ ರೋಗಿಗಳ ಸೇವೆಗೆ ಬೇಕಾದ ಉಪಕರಣಗಳನ್ನು ನೀಡಲು ನಿಮಗೇನು ಕಷ್ಟ? ಎಂದು ಡಾ.ವಿಜಯ್ ಕುಮಾರ್ ಮೇಲೆ ಸ್ಪೀಕರ್ ರಮೇಶ್ ಕುಮಾರ್ ಹರಿಹಾಯ್ದರು.