ಶನಿ ಪ್ರಭಾವ ತಾಕದಂತೆ ತಾಯತ ಕಟ್ಟಿಸಿಕೊಂಡ ಜನ, ಮಹಾಕಾಳಿಗೆ ಮೊರೆ

Jan 24, 2020, 3:19 PM IST

ಮಂಡ್ಯ(ಜ.24): ಶನಿ ಪ್ರಭಾವ ತಾಕದಂತೆ ಮಹಾಕಾಳಿಗೆ ವಿಶೇಷ ಪೂಜೆ ಸಲ್ಲಿಸಿ ತಾಯತಕಟ್ಟಿಸಿಕೊಂಡ ಘಟನೆ ಮಂಡ್ಯದಲ್ಲಿ ನಡೆದಿದೆ. ಮೌನಿ ಅಮವಾಸ್ಯೆ ಹಿನ್ನೆಲೆ ಮಹಾಕಾಳಿ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬಂದಿದೆ. ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಇರುವ ಮಹಾಕಾಳಿ ದೇವಾಲಯದಲ್ಲಿ ಪಶ್ವಿಮಾಭಿಮುಖವಾಗಿರೋ ಜಿಲ್ಲೆಯ ಏಕೈಕ ಮಹಾಕಾಳಿ ದೇವಾಲಯ ಇದಾಗಿದೆ.

ಮಕರ ರಾಶಿಗೆ ಶನಿ ಪ್ರವೇಶ: ಮಂಡ್ಯದಲ್ಲಿ ವಿಶೇಷ ಪೂಜೆ

ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿರೋ ಹಿನ್ನಲೆಯಲ್ಲಿ ಭಕ್ತರು ಕಾಳಿ ದೇವಿಯ ಮೊರೆ ಹೋಗಿದ್ದಾರೆ. ಮಕರ ರಾಶಿಯ ಹೆಸರಿರೋ ಬಹುತೇಕ ಭಕ್ತರಿಂದ ಕಾಳಿ ದೇವಿಗೆ ವಿಶೇಷ ಪೂಜೆ ನಡೆದಿದೆ. ಶನಿ ಪ್ರಭಾವ ಬೀರದಂತೆ ದೇವಾಲಯದಲ್ಲಿ ವಿಶೇಷ ಹೋಮ ಹವನ ನಡೆದಿದೆ. ಶನಿ ಪ್ರಭಾವ ತಾಕದಂತೆ ತಾಯತ ಕಟ್ಟಿಸಿಕೊಂಡು ಭಕ್ತರು ತಡೆ ಒಡೆಸಿಕೊಳ್ಳುತ್ತಿದ್ದಾರೆ. ಶನಿಯಿಂದ ಯಾವುದೇ ತೊಂದರೆಯಾಗದಿರಲೆಂದಯ ಮಹಾಕಾಳಿಗೆ ಭಕ್ತರಿಂದ ವಿಶೇಷ‌ ಪೂಜಾ ಕೈಂಕರ್ಯ ನಡೆದಿದ್ದು, ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಪ್ರತ್ಯಂಗಿರಾ ಹಾಗೂ ಶನಿಶಾಂತಿ ಹೋಮ ನಡೆದಿದೆ.