ಬೆಳ್ಳಿಬೆಡಗು ಸಂಭ್ರಮದಲ್ಲಿ ಪಂಚಮಸಾಲಿ ಟ್ರಸ್ಟ್: ಸಂಕ್ರಾಂತಿ ಸ್ಪೆಷಲ್ ಹರಜಾತ್ರೆ

Jan 12, 2020, 6:01 PM IST

ದಾವಣಗೆರೆ, [ಜ.12]: ಹರ ಮುನಿದರೆ ಗುರು ಕಾಯುವನು ಎಂಬ ನಾಣ್ನುಡಿ ಅತ್ಯಂತ ಪ್ರಚಲಿತ.  ಹರನಷ್ಟೇ ಶಕ್ತಿ ಗುರುವಿನಲ್ಲಿರುತ್ತದೆ ಎಂಬುದು ಇದರ ಅರ್ಥ. ಗುರು ಮತ್ತು ಹರನ ಒಲುಮೆಯನ್ನು ಒಟ್ಟಿಗೆ ಪಡೆಯಲು ಹೊಸದಾಗಿ ಆರಂಭವಾಗಿರುವ ವಿಶೇಷ ಉತ್ಸವ ಹರಜಾತ್ರೆ. 

ದಾವಣಗೆರೆಯಲ್ಲಿ ಹೀಗೊಬ್ಬ ಸ್ವಾಮೀಜಿ: ಮಠದೊಳಗೆ ಪ್ರವಚನ, ಹೊರಗಡೆ 'ಶ್ರಮದಾನ'! 

ದಾವಣಗೆರೆ ಜಿಲ್ಲೆಯ ಹರಿಹರದಲ್ಲಿರುವ  ಪಂಚಮಸಾಲಿ ಟ್ರಸ್ಟ್ ಬೆಳ್ಳಿಬೆಡಗಿನ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಪಂಚಮಸಾಲಿ ಪೀಠದಲ್ಲಿ ಇದೇ ಜ. 14 ಮತ್ತು 15ರಂದು ಹರಜಾತ್ರೆ ನಡೆಯಲಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

14ರಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಇಲಕಲ್ ಶ್ರೀ ಮಹಾಂತಸ್ವಾಮಿಗಳು ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಪಂಚಮಸಾಲಿ ಟ್ರಸ್ಟ್ ನ ಒಂದು  ಝಲಕ್ ವಿಡಿಯೋನಲ್ಲಿ ನೋಡಿ...