ಚಿತ್ರದುರ್ಗದಲ್ಲಿ ಕೊರೋನಾಗೆ ಡೋಂಟ್‌ಕೇರ್: ಯಾಮಾರಿದ್ರೆ ಹರೋಹರ..!

Apr 13, 2021, 11:54 AM IST

ಚಿತ್ರದುರ್ಗ(ಏ.13): ಯುಗಾದಿ ಹಬ್ಬದಂದು ಮಾರುಕಟ್ಟೆಯಲ್ಲಿ ಜನರು ತುಂಬಿತುಳುಕುತ್ತಿದ್ದಾರೆ. ಯಾರೊಬ್ಬರಲ್ಲೂ ಕೊರೋನಾ ಭಯಾನೇ ಕಾಣಿಸುತ್ತಿಲ್ಲ. ಹೌದು, ರಾಜ್ಯದಲ್ಲಿ ಕೊರೋನಾ ಎರಡನೇ ಅಲೆಯ ಅಬ್ಬರ ಜೋರಾಗಿದೆ. ಆದಾಗ್ಯೂ ಕೂಡ ಜನರು ಸರ್ಕಾರದ ಆದೇಶಗಳಿಗೆ ಕವಡೆ ಕಾಸಿನ ಕಿಮ್ಮತ್ತೂ ನೀಡುತ್ತಿಲ್ಲ. ಮಾರುಕಟ್ಟೆಯಲ್ಲಿ ಜನರು ಸಾಮಾಜಿಕ ಅಂತರ ಕಾಪಾಡುತ್ತಿಲ್ಲ, ಮಾಸ್ಕ್‌ ಧರಿಸುತ್ತಿಲ್ಲ. ಏನಾದರೂ ಆಗ್ಲಿ ನಾವು ಹಬ್ಬ ಮಾಡೇ ತೀರುತ್ತೇವೆ ಎನ್ನುವಂತಿದೆ ಜನರ ನಡೆ. 
ಕೊರೊನಾ ಮರೆತು ಹಬ್ಬದ ಖರೀದಿಯಲ್ಲಿ ಜನ ಬ್ಯುಸಿ, ನಿಯಮಾವಳಿಗಳು ಲೆಕ್ಕಕ್ಕೇ ಇಲ್ಲ!