ಮೃತದೇಹದ ಅಂತ್ಯಸಂಸ್ಕಾರದಲ್ಲಿ ಮಂಡ್ಯ ಜಿಲ್ಲಾಡಳಿತ ನಿರ್ಲಕ್ಷ್ಯ ಆರೋಪ

May 2, 2020, 3:31 PM IST

ಮಂಡ್ಯ(ಮೇ.02): ಮುಂಬೈನಿಂದ ಬಂದ ಮೃತದೇಹದಿಂದಾಗಿ ಮಂಡ್ಯದಲ್ಲಿ ಕೊರೋನಾ ಭೀತಿ ಮತ್ತೆ ಹೆಚ್ಚಾಗಿದೆ. ಅಂತ್ಯಸಂಸ್ಕಾರ ಮಾಡುವ ಸಂದರ್ಭ ನಿರ್ಲಕ್ಷ್ಯ ವಹಿಸಿದ್ದರ ಪರಿಣಾಮ ಇದೀಗ ನಾಲ್ಕು ಜನರು ಸೋಂಕಿತರಾಗಿದ್ದಾರೆ.

ಮುಂಬೈನಿಂದ ಬಂದಿದ್ದ ಮೃತದೇಹದ ಅಂತ್ಯಸಂಸ್ಕಾರದ ಸಂದರ್ಭ ಕುಟುಂಬಸ್ಥರಿಗೆ ಪೌರ ಕಾರ್ಮಿಕ ನೆರವು ನೀಡಿದ್ದರು. ಆಂಬುಲೆನ್ಸ್‌ ಬರುವ ಸಂದರ್ಭ ಸ್ಯಾನಿಟೈಸರ್ ಸಿಂಪಡಿಸಲಾಗಿತ್ತು.

ಮುಂಬೈನಿಂದ ಬಂದ ಮೃತದೇಹದಿಂದ ಮಂಡ್ಯಕ್ಕೆ ಕಂಟಕ..!

ಪೌರಕಾರ್ಮಿಕನಿಗೆ ಪಿಪಿಇ ಕಿಟ್‌ ನೀಡದೆ ಕೆಲಸ ಮಾಡಿಸಲಾಗಿತ್ತು ಎಂಬ ಮಾತು ಕೇಳಿ ಬಂದಿದೆ. ಆದರೆ ಜಿಲ್ಲಾಧಿಕಾರಿ ಅವರು ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು ಎಂದಿದ್ದಾರೆ. ಸೋಂಕು ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿ ಬಂದಿದೆ.