ಕಾರವಾರಕ್ಕೆ ಶಾಪವಾಗಿದೆ ರಾಜಕಾಲುವೆ, ತುಂಬಿ ಹೋಗಿದೆ ಕಲ್ಮಶ, ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ!

Mar 4, 2021, 4:43 PM IST

ಉತ್ತರ ಕನ್ನಡ (ಮಾ. 04):  ಕಾರವಾರ ನಗರಕ್ಕೆ ಎಂಟ್ರಿಯಾಗುತ್ತಿದ್ದಂತೆ ಗಬ್ಬು ವಾಸನೆ ಸ್ವಾಗತಿಸುತ್ತದೆ. ಇಲ್ಲಿನ ಜನರು ರಸ್ತೆಯಲ್ಲಿ ಓಡಾಡುವಾಗ ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ ಇದೆ. ನಗರದ ಕೊಳಚೆ ನೀರು, ಇಲ್ಲಿನ ರಾಜಕಾಲುವೆಗೆ ಸೇರುತ್ತದೆ. ಇಲ್ಲಿಂದ ಸಮುದ್ರ ಸೇರುತ್ತದೆ.

ರಮೇಶ್ ರಾಸಲೀಲೆ ಪ್ರಕರಣ ; ಯಾರ್ಯಾರು, ಏನೇನಂದ್ರು.?

ಇಲ್ಲಿನ ಕೊಳಚೆ ನೀರಿನಿಂದ ಜನರಿಗೆ ಆಗುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈ ಕಾಲುವೆ ಸ್ವಚ್ಛತೆಗೆ ಪ್ರತಿವರ್ಷ ಕೋಟಿಗಟ್ಟಲೇ ಹಣ ವ್ಯಯಿಸುತ್ತಿದ್ದರೂ, ಈವರೆಗೂ ಸ್ವಚ್ಛತಾ ಕಾರ್ಯ ಮಾತ್ರ ನಡೆದಿಲ್ಲ. ಇನ್ನು ಇಲ್ಲಿನ ಸುತ್ತಮುತ್ತಲಿನ ಬಾವಿ ನೀರು ಕೂಡಾ ಕಲುಷಿತವಾಗಿದೆ.