Nanna Votu Nanna Matu: ಕಾಂಗ್ರೆಸ್‌ ಬಂದರೆ ಬಡ ಜನರಿಗೆ ಒಳ್ಳೆದಾಗುತ್ತೆ: ವಿಜಯಪುರದ ಮಂದಿ ಹೇಳಿದ್ದೇನು?

Feb 24, 2023, 4:16 PM IST

ಬಿಜೆಪಿ ಸರ್ಕಾರ ಬಂದು ಇಲ್ಲಿ ಏನು ಕೆಲಸವನ್ನು ಮಾಡಿಲ್ಲ, ನಮ್ಮ ಕ್ಷೇತ್ರದಲ್ಲಿ ಯಾವುದೇ ಕೆಲಸವಾಗಿಲ್ಲ. ಕಾಂಗ್ರೆಸ್‌ ಸರ್ಕಾರ ಈ ಬಾರಿ ಬರಬೇಕು ಎಂದು ವಿಜಯಪುರ ಮತದಾರರು ತಿಳಿಸಿದ್ದಾರೆ. ಕಾಂಗ್ರೆಸ್‌ ಮಾಡಿರುವಂತ ಯೋಜನೆಯನ್ನು ಬಿಜೆಪಿ ಮುಂದುವರೆಸಿಕೊಂಡು ಬರುತ್ತಿದೆ, ಮೋದಿ ಯೋಜನೆ ಅಂತರಾಷ್ಟೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ ಹೊರತು, ಯಾವುದೇ ಯೋಜನೆ ಹಳ್ಳಿಗಳಿಗೆ ತಲುಪಿಲ್ಲ. ರಾಜ್ಯ ಸರ್ಕಾರವಾಗಿ ಕಾಂಗ್ರೆಸ್‌ ಬಂದರೆ ಬಡ ಜನಗಳಿಗೆ ಒಳ್ಳೆದಾಗುತ್ತೆ. ಸಿದ್ದರಾಮಯ್ಯ ಸರ್ಕಾರ ಯುವಕರಿಗೆ ಉದ್ಯೋಗವನ್ನು ಸೃಷ್ಟಿ ಮಾಡಿತ್ತು. ಕಾಂಗ್ರೆಸ್‌ ಇರುವಾಗ 10ಕೆಜಿ ಅಕ್ಕಿ ಕೊಡುತ್ತಿದ್ದರು, ಆದ್ರೆ ಈಗ 5 ಕೆಜಿ ಅಕ್ಕಿ ಕೊಡುತ್ತಿದ್ದಾರೆ ಎಂದು ಹೇಳಿದರು.