ಖೂಬಾ ಮತ್ತೆ ಎಡವಟ್ಟು.. ಗನ್ ಮ್ಯಾನ್ ಬಳಿ ಚಪ್ಪಲಿ ಹಾಕಿಸಿಕೊಂಡ ಸಚಿವ!

Aug 19, 2021, 5:32 PM IST

ಬಳ್ಳಾರಿ(ಆ.19)  ಕೇಂದ್ರ ಸಚಿವ ಭಗವಂತ ಖೂಬಾ ಮತ್ತೊಮ್ಮೆ ಎಡವಟ್ಟು  ಮಾಡಿಕೊಂಡಿದ್ದಾರೆ. ಗನ್  ಮ್ಯಾನ್ ಬಳಿ ಚಪ್ಪಲಿ ತೆಗೆಸಿಕೊಂಡು ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಗಾಳಿಯಲ್ಲಿ ಗುಂಡು ಹಾರಿಸಿ ಕೇಂದ್ರ ಸಚಿವರಿಗೆ ಸ್ವಾಗತ

ಜನಾಶೀರ್ವಾದ ಯಾತ್ರೆ ಸಂದರ್ಭ ಭಗವಂತ ಖೂಬಾ ಬೆಂಬಲಿಗರು ಪುಂಟಾಟ ಮೆರೆದಿದ್ದರು.  ನಾಡಬಂದೂಕಿನಿಂದ ಗುಂಡು ಹಾರಿಸಿದ್ದು ದೊಡ್ಡ ಸುದ್ದಿಯಾಗಿತ್ತು. ಅಧಿಕಾರ ಸಿಕ್ಕವರು ಈ ರೀತಿ ವರ್ತನೆ ಮಾಡುವುದು ಸರಿಯೇ  ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ.  ಯಾದಗಿರಿಯ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರನ್ನು ಸಸ್ಪೆಂಡ್ ಮಾಡಲಾಗಿದೆ. ಇದು ಯಾವ ನ್ಯಾಯ ಎನ್ನುವ ಮಾತುಗಳು ಕೇಳಿ ಬಂದಿವೆ.