'ಏಯ್ ಮಿ. ರಮೇಶ್ ಕುಮಾರ್, ಕಪಟನಾಟಕಧಾರಿ ನಾಚಿಕೆ ಆಗಲ್ವಾ..'? ಮಾಜಿ ಸ್ವೀಕರ್‌ಗೆ ಅವಾಜ್‌..!

Jan 11, 2020, 2:12 PM IST

ಕೋಲಾರ(ಜ.11): ಏಯ್‌ ಮಿಸ್ಟರ್ ರಮೇಶ್‌ ಕುಮಾರ್‌ ಬಡವಾ ಎನ್ನುತ್ತಾ ಜನರಿಗೆ ಮೋಸ ಮಾಡ್ತಿಯಾ ಎಂದು ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಮಾಜಿ ಸ್ಪೀಕರ್ ರಮೇಶ್‌ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾನನಷ್ಟ ಮೊಕದ್ದಮೆ ಹಾಕಿದಕ್ಕೆ ಮಾಜಿ ಸ್ಪೀಕರ್ ವಿರುದ್ಧ ಮಾಜಿ ಶಾಸಕ ಗರಂ ಆಗಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ಏಯ್ ಮಿಸ್ಟರ್ ರಮೇಶ್ ಕುಮಾರ್ ನೀನು ಬಡವ ಎಂದು ತಾಲೂಕಿನ ಜನರನ್ನ ವಂಚನೆ‌ ಮಾಡ್ತೀಯಾ..? ವಿಧಾನ ಸೌಧದಲ್ಲಿ ನಾನು ಸಾಚ, ಬಡವ ಎಂದು ಮಾತಾಡ್ತೀಯಾ.. ನೂರಾರು ಎಕರೆ ಸರ್ಕಾರಿ ಜಮೀನು ಕಬಳಿಸರುವ ನಿನಗೆ ನಾಚಿಕೆ ಇದ್ಯಾ ಎಂದು ಎಂದು ಪ್ರಶ್ನಿಸಿದ್ದಾರೆ.

ಕೋಲಾರದಲ್ಲಿ ಒಂದಾದ್ರು JDS, BJP, ಕಾಂಗ್ರೆಸ್ ಶಾಸಕರು..!

ನಿನಗೆ ತಾಕತ್ ಇದ್ದರೆ ಜೈಲ್‌ಗೆ ಹಾಕಿಸೋದಲ್ಲ ಗಲ್ಲಿಗೆ ಹಾಕ್ಸು. ಅಕ್ರಮವಾಗಿ ಸರ್ಕಾರಿ ಅಧಿಕಾರಿಗಳನ್ನ ಬೆದರಿಸಿ ಜಮೀನು ಕಬಳಿಸಿರುವ ನನಗೆ ನಾಚಿಕೆ ಮಾನ ಮರ್ಯಾದೆ ಇಲ್ಲ. ವಿಧಾನಸೌಧದಲ್ಲಿ ಪ್ರಾಮಾಣಿಕ, ಸತ್ಯ ಹರಿಶ್ವಂದ್ರ ಅಂತಾ ಮಾತಾಡ್ತಾರೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ವಾಗ್ದಾಳಿ ನಡೆಸಿದ್ದು, ರಮೇಶ್ ಕುಮಾರ್ ಕಪಟ ನಾಟಕಧಾರಿ ಮಿಸ್ಟರ್ ರಮೇಶ್ ಕುಮಾರ್ ನಾಚಿಕೆ ಆಗೋದಿಲ್ವಾ..? ಎಂದು ಪ್ರಶ್ನಿಸಿದ್ದಾರೆ.

ಇದೆ 9ರಂದು ವೆಂಕಟಶಿವಾರೆಡ್ಡಿ ವಿರುದ್ಧ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮ್ಮೆ ಹೂಡಿದ್ದರು. 2019ರ ಡಿ.19ರಂದು ರಮೇಶ್ ಕುಮಾರ್ ವಿರುದ್ಧ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದಕ್ಕೆ ರಮೇಶ್ ಕುಮಾರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಸೀಕ್ವೆನ್ಸ್‌ ಬದಲಿಸಿ ವಿಡಿಯೋ ಬಿಡುಗಡೆ ಮಾಡಿದ್ರಾ ಕುಮಾರಸ್ವಾಮಿ..?