ಗೆದ್ದ ಬಿಜೆಪಿ: ಮೋದಿ ಅಭಿಮಾನಿಗಳಿಗೆ ಅವಾಜ್ ಹಾಕಿದ ಬೇಳೂರು ಗೋಪಾಲ ಕೃಷ್ಣ!

May 25, 2019, 1:02 PM IST

ಶಿವಮೊಗ್ಗ[ಮೇ.25]: ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿದ್ದ ಮೋದಿ ಅಭಿಮಾನಿಗಳ ಘೋಷಣೆಯ ಆರ್ಭಟಕ್ಕೆ ಆಕ್ರೋಶಗೊಂಡ ಮಾಜಿ ಶಾಸಕ ಬೇಳೂರು ಗೋಪಾಲ ಕೃಷ್ಣ ಕಾರಿನಿಂದ ಇಳಿದು ಅವಾಜ್ ಹಾಕಿರುವ ಘಟನೆ ಸಾಗರ ಪಟ್ಟಣದಲ್ಲಿ ನಡೆದಿದೆ. ಸಾಗರ ಪಟ್ಟಣದ ಅಣಲೆಕೊಪ್ಪ  ವಾರ್ಡಿನಲ್ಲಿ ನಗರಸಭೆ ಚುನಾವಣಾ ಪ್ರಚಾರ ನಡೆಸಿ ಹಿಂತಿರುಗುವ ವೇಳೆ ಈ ಘಟನೆ ನಡೆದಿದೆ. ಬಿಜೆಪಿ ಗೆಲುವನ್ನು ಸಂಭ್ರಮಿಸುತ್ತಿದ್ದ ಅಭಿಮಾನಿಗಳು ಮೋದಿ, ಮೋದಿ ಎಂಬ ಘೋಷಣೆ ಮೊಳಗಿಸಿ ಬೇಳೂರು ಗೋಪಾಲ ಕೃಷ್ಣ ಕಾರಿಗೆ ಅಡ್ಡ ಹೋಗಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಮಾಜಿ ಶಾಸಕ ಕಾಂಗ್ರೆಸ್, ಕಾಂಗ್ರೆಸ್ ಎಂದು ಕೂಗುವಂತೆ ಅವಾಜ್ ಹಾಕಿದ್ದಾರೆ. ಆದರೆ ಬಿಜೆಪಿ ಬೆಂಬಲಿಗರ ಘೋಷಣೆ ತಾರಕ್ಕೇರಿದ್ದರಿಂದ ಸ್ಥಳದಿಂದ ಕಾಲ್ಕಿತ್ತಿದ್ದಾರೆ.