ಸರ್ಕಾರಕ್ಕೆ ಕೊರೋನಾಗೆ ಬ್ರೇಕ್ ಹಾಕುವ ಚಿಂತೆ, ಇಲ್ಲಿ ಅಂತರವಿಲ್ಲದೇ ಜನ ಜಾತ್ರೆ!

Jun 6, 2021, 10:13 AM IST

ಬೆಂಗಳೂರು (ಜೂ. 06): ಸರ್ಕಾರ ಸೆಮಿಲಾಕ್‌ಡೌನ್, ಕಠಿಣ ನಿರ್ಬಂಧಗಳ ಮೊರೆ ಹೋದರೆ, ವಿಜಯಪುರ ಜನ ಮಾತ್ರ ಇದ್ಯಾವುದಕ್ಕೂ ಕ್ಯಾರೇ ಎನ್ನುತ್ತಿಲ್ಲ. ಕೊರೋನಾ ಬಗ್ಗೆ ತಲೆಕೆಡಿಸಿಕೊಳ್ಳದೇ, ಅದ್ಧೂರಿಯಾಗಿ ಬಡಿಗೆ ಜಾತ್ರೆ ನಡೆಸಿದ್ದಾರೆ. ವಿಜಯಪುರದ ಕನ್ನೂರು ಗ್ರಾಮಸ್ಥರು ಅಂತರ ಮರೆತು ಜಾತ್ರೆ ನಡೆಸಿದ್ದಾರೆ. ಇದಕ್ಕೆ  ಬ್ರೇಕ್ ಹಾಕಬೇಕಾದ ಜಿಲ್ಲಾಡಳಿತ, ಹಾಗೂ ಪೊಲೀಸರು ಮಾತ್ರ ಕಣ್ಮುಚ್ಚಿ ಕುಳಿತಿದ್ದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.