May 10, 2020, 1:22 PM IST
ಬಾಗಲಕೋಟೆ(ಮೇ.10): ಜಿಲ್ಲೆಗೆ ವಿವಿಧ ರಾಜ್ಯಗಳಿಂದ ಒಟ್ಟು 990 ಮಂದಿ ವಲಸೆ ಕಾರ್ಮಿಕರು ಬರಲಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಜನರು ಮತ್ತಷ್ಟು ಆತಂಕಕ್ಕೊಳಗಾಗಿದ್ದಾರೆ. ವಲಸಿಗರ ಆರೋಗ್ಯ ತಪಾಸಣೆಗಾಗಿ ನೋಡಲ್ ಅಧಿಕಾರಿಗಳನ್ನ ಜಿಲ್ಲಾಡಳಿತ ನೇಮಕ ಮಾಡಿದೆ.
ಸಿಎಂ ಯಡಿಯೂರಪ್ಪರಿಂದ ಮತ್ತೊಂದು ವಿಶೇಷ ಪ್ಯಾಕೇಜ್ ಘೋಷಣೆ..?
ಅದರಲ್ಲೂ ಮಹಾರಾಷ್ಟ್ರದಿಂದಲೇ ಅತೀ ಹೆಚ್ಚು(481) ಮಂದಿ, ಗೋವಾದಿಂದ 128, ತಮಿಳುನಾಡಿನಿಂದ 49, ತೆಲಂಗಾಣದಿಂದ 47, ಆಂಧ್ರಪ್ರದೇಶದಿಂದ 45, ಗುಜರಾತ್ನಿಂದ 45, ಕೇರಳದಿಂದ 43 ಹಾಗು ರಾಜಸ್ಥಾನದಿಂದ 43, ದೆಹಲಿಯಿಂದ 25, ಬಿಹಾರದಿಂದ 22 ಹಾಗೂ ಉತ್ತರ ಪ್ರದೇಶದಿಂದ 20 ಮಂದಿ ವಲಸೆ ಕಾರ್ಮಿಕರು ಆಗಮಿಸಲಿದ್ದಾರೆ.