Jun 9, 2021, 5:37 PM IST
ಎರಡನೇ ಅಲೆ ತಗ್ಗಿತು ಎನ್ನುವಷ್ಟರಲ್ಲಿ ಹೊಸ ತಳಿಯ ಮೂಲಕ ಮತ್ತೆ ಕೊರೋನಾ ಮೂರನೇ ಅಲೆ ದಾಳಿ ಇಡಲು ಸಜ್ಜಾಗಿದೆ. ರಾಜ್ಯದಲ್ಲಿ ಕೊರೋನಾ ಭೀತಿ ನಡುವೆ ಶಿವಮೊಗ್ಗದಲ್ಲಿ ಕವಾಸಕೀ ರೋಗ ಕಾಣಿಸಿಕೊಂಡಿದೆ. ಇತ್ತ ಬಾಗಲಕೋಟೆಯಲ್ಲಿ ಮಕ್ಕಳಲ್ಲಿ ಮಿಸ್ಸಿ ರೋಗ ಕಾಣಿಸಿಕೊಂಡಿದೆ. ಇನ್ನು ರಾಜ್ಯದಲ್ಲಿ ಮೌಢ್ಯಾಚರಣೆ ಮುಂದುವರೆದಿದ್ದು ಕೊಪ್ಪಳದಲ್ಲಿ ಮಕ್ಕಳನ್ನು ಬಳಕೆ ಮಾಡಿಕೊಂಡಿದ್ದಾರೆ.
ಅನ್ಲಾಕ್ ಹೇಗೆ ಮಾಡಲಾಗುತ್ತದೆ..? ಆರ್ ಅಶೋಕ್ ಮಾತು
ಇನ್ನು ಕೊರೋನಾ ಬಂದು ಬೀದಿ ವ್ಯಾಪಾರಿಗಳ ಗೋಳು ಕೇಳುವವರಿಲ್ಲ. ಒಂದು ಹೊತ್ತಿನ ಊಟಕ್ಕಾಗಿ ದಿನವಿಡೀ ಬಿಸಿಲಲ್ಲಿ ನಿಂತು ವ್ಯಾಪಾರ ನಡೆಸುತ್ತಿದ್ದರು. ಆದರೀಗ ಎಲ್ಲವೂ ಬಂದ್ ಆಗಿದೆ. ಹೀಗಿರುವಾಗ ಮಧ್ಯಪ್ರದೇಶದಲ್ಲಿ ಬೀದಿ ಬದಿ ವ್ಯಾಪಾರಿಗೆ ಆರಕ್ಷನೇ ರಕ್ಷಕನಾಗಿದ್ದಾನೆ. ಇಷ್ಟೇ ಅಲ್ಲದೇ ಕೊರೋನಾ ಕಾಲದಲ್ಲಿ ಸದ್ದು ಮಾಡಿದ ಸುದ್ದಿಗಳ ಒಂದು ರೌಂಡಪ್ ಇಲ್ಲಿದೆ.