ಪ್ರತಿಭಟನೆ ಹೆಸರಿನಲ್ಲಿ ಮೈಸೂರು ದಸರಾ ಸೇರಿ ಇತರೆಡೆ ಪಿಎಫ್ಐ ದಾಳಿಗೆ ಸಂಚು!

Sep 27, 2022, 11:17 PM IST

ಪ್ರತಿಭಟನೆ ಹೆಸರಿನಲ್ಲಿ ಮೈಸೂರು ದಸರಾ ಸೇರಿದಂತೆ ಇತರ ಕಾರ್ಯಕ್ರಮಗಳ ಮೇಲೆ ದಾಳಿ ಮಾಡಲು ಪಿಎಫ್ಐ ಸಂಚು ಮಾಡಿತ್ತು. ಆದರೆ ಕರ್ನಾಟಕ ಪೊಲೀಸರ ಕಾರ್ಯಾಚರಣೆಯಿಂದ ಈ ಎಲ್ಲಾ ದಾಳಿ ಹಾಗೂ ಹಿಂಸಾತ್ಮಕ ಪ್ರತಿಭಟನೆ ತಡೆಯುವಲ್ಲಿ ಕರ್ನಾಟ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಕೇರಳ ಪೊಲೀಸರು ಈ ವಿಚಾರದಲ್ಲಿ ಹಿನ್ನಡೆ ಅನುಭವಿಸಿದ್ದಾರೆ. ಕೇರಳದಲ್ಲಿ ಪಿಎಫ್ಐ ಪ್ರತಿಭಟನೆಗೆ ಭಾರಿ ನಷ್ಟ ಸಂಭವಿಸಿಸಿದೆ. ಕರ್ನಾಟಕದ 20 ಜಿಲ್ಲೆಗಳಲ್ಲಿ ಪಿಎಪ್ಐ, ಎಸ್‌ಡಿಪಿಐ ಸೇರಿದಂತೆ ಸಹೋದರ ಸಂಘಟನೆಗಳ ನಾಯಕರ ಮೇಲೆ ಇಂದು ರಾಜ್ಯ ಪೊಲೀಸರು ದಾಳಿ ನಡೆಸಿ ಶಾಕ್ ನೀಡಿದ್ದಾರೆ. 100ಕ್ಕೂ ಹೆಚ್ಚು ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಮಧ್ಯರಾತ್ರಿ ಈ ದಾಳಿ ನಡೆಸಲಾಗಿದೆ. ಕೆಲವರ ತೀವ್ರ ವಿಚಾರಣೆಯನ್ನೂ ನಡೆಸಲಾಗಿದೆ. ಇಂದು ಪೊಲೀಸರ ದಾಳಿ ಕುರಿತು ಸಂಪೂರ್ಣ ವಿವರ ಇಲ್ಲಿದೆ.