ದಿನವೊಂದಕ್ಕೆ ಲಕ್ಷ ಪ್ರಕರಣ, ಸಾವಿರ ಸಾವು.. ಎಚ್ಚರ...ಎಚ್ಚರ!

Apr 8, 2021, 5:47 PM IST

ನವದೆಹಲಿ( ಏ. 08)  ಯಾರೂ ಏನೇ  ಕ್ರಮ ತೆಗೆದುಕೊಂಡಿದ್ದರೂ ಕೊರೋನಾ ಮಾತ್ರ ನಿಯಂತ್ರಣಕ್ಕೆ ಬರುತ್ತಿಲ್ಲ. ಹತ್ತು ರಾಜ್ಯಗಳಲ್ಲಿ ಕೊರೋನಾ ರಣಕೇಕೆ ಹಾಕುತ್ತಿದೆ. ಒಂದು ಕಡೆ ಸೋಂಕಿನ ಸಂಖ್ಯೆ ಏರಿಕೆಯಾಗಿದ್ದರೆ ಇನ್ನೊಂದು ಕಡೆ ಸಾವಿನ ಸಂಖ್ಯೆಯೂ ಏರಿಕೆಯಾಗಿದ್ದು ಆತಂಕ ಹೆಚ್ಚಿಸಿದೆ. 

ಕೊರೋನಾ ಆತಂಕವನ್ನು ತಜ್ಞರು ಮೊದಲೇ ಹೇಳಿದ್ದರು

ಎರಡನೇ ಅಲೆ ಡೆಡ್ಲಿ ಅಲ್ಲ ಎಂದು ನಿರ್ಲಕ್ಷ್ಯ ತಾಳಿದರೆ ಅಷ್ಟೇ ಕತೆ. ದಿನವೊಂದಕ್ಕೆ ಸಾವಿನ ಸಂಖ್ಯೆ ಸಾವಿರ ದಾಟಿದೆ. ದಯವಿಟ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಮತ್ತೊಮ್ಮೆ ಕೇಳಿಕೊಳ್ಳಲೇಬೇಕಾಗಿದೆ.