ದೇವರ ಉತ್ಸವ ಮೂರ್ತಿ ಕೊಂಡೊಯ್ಯಲು ಬಡಿಗೆಯಿಂದ ಬಡಿದಾಟ, 80 ಕ್ಕೂ ಹೆಚ್ಚು ಜನರಿಗೆ ಗಾಯ

Oct 16, 2021, 9:34 AM IST

ಬೆಂಗಳೂರು (ಅ. 16): ಆಂಧ್ರದ ಕನೂರ್ ಜಿಲ್ಲೆಯ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ಬಡಿಗೆಯಿಂದ ಬಡಿದಾಡಿಕೊಂಡಿರುವ ಆಚರಣೆ ನಡೆದಿದೆ. 

ನಡು ಬೀದಿಯಲ್ಲಿ ತಲ್ವಾರ್ ಹಿಡಿದು ಡ್ಯಾನ್ಸ್... ಬೆಳಗಾವಿಯಲ್ಲಿ ಇದೇನು ಸಂಭ್ರಮ!

ದಸರಾ ಹಬ್ಬದ ದಿನ ಪೂಜೆ ನಂತರ ರಾತ್ರಿ ಉತ್ಸವ ಮೂರ್ತಿಯನ್ನು ಹೊರ ತರಲಾಗುತ್ತದೆ. ಆಗ ದೇವರ ಉತ್ಸವ ಮೂರ್ತಿಯನ್ನು ಕರೆದೊಯ್ಯಲು ಪೈಪೋಟಿ ಶುರುವಾಗಿದೆ. ಯಾರು ಈ ಮೂರ್ತಿಯನ್ನು ಅವರ ಊರಿಗೆ ಕೊಂಡೊಯ್ಯುತ್ತಾರೋ ಅವರಿಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಇದೆ. ಈ ಬಡಿದಾಟದಲ್ಲಿ 80 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದೆ.