ಗದಗ: ಹೋಮಕ್ಕೆ ಆಗಮಿಸಿದ ಕಪಿರಾಯ ಪ್ರಸಾದ ಸ್ವೀಕರಿಸಿದ!

Jun 17, 2019, 10:49 PM IST

ಮಂಗವೊಂದು ಪವಮಾನ ಹೋಮ ಮಾಡೋ ಸಂದರ್ಭದಲ್ಲಿ ಬಂದು ಪವಮಾನನಿಗೆ ನಮಿಸಿ, ಯಾರಿಗೂ ಯಾವುದೇ ತೊಂದರೆ ಕೊಡದೇ ಹೋದ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಕಳಸಾಪುರ ಗ್ರಾಮದ ಮನೆಯೊಂದರಲ್ಲಿ ಪವಮಾನ ಹೋಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಲ್ಲಿಗೆ ಆಗಮಿಸಿದ ಕಪಿರಾಯ ಹೋಮಕುಂಡಕ್ಕೆ ನಮಿಸಿ ಅಲ್ಲಿದ್ದ ಪ್ರಸಾದವನ್ನಷ್ಟೇ ಸ್ವೀಕರಿಸಿ ತನ್ನ ಪಾಡಿಗೆ ತಾನು ಹೊರಟು ಹೋಗಿದೆ. ಇನ್ನು ಆ ಸ್ಥಳದಲ್ಲಿ ಅಷ್ಟೆಲ್ಲಾ ಹಣ್ಣು ಹಂಪಲುಗಳಿದ್ರೂ ಸಹ ಅದ್ಯಾವುದನ್ನೂ ಮುಟ್ಟದೇ ಬರಿ ಪ್ರಸಾದವನ್ನಷ್ಟೇ ಸ್ವೀಕರಿಸಿದ್ದು ಸ್ಥಳದಲ್ಲಿದ್ದವರಿಗೆ ಆಶ್ಚರ್ಯವನ್ನುಂಟು ಮಾಡಿತು. ಈ ಕೋತಿರಾಯನ ಭಕ್ತಿ ಕಂಡ ಕುಟುಂಬ, ಪೂಜೆ ಸಮಯದಲ್ಲಿ ಸಾಕ್ಷಾತ್ ಹನುಮಂತನೇ ಆಗಮಿಸಿದ್ದಾನೆ ಅಂತ ಭಾವಪರಶರಾಗಿ ಹನುಮಂತನ ಭಕ್ತಿಗೀತೆ ಸಹ ಸಾದರಪಡಿಸಿದ್ದಾರೆ. ಕೋತಿರಾಯನ ಭಕ್ತಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.