ಬಹಳ ಸ್ನೇಹಜೀವಿ, ಏನ್‌ ಹೇಳ್ಬೇಕು ಏನೂ ಗೊತ್ತಾಗ್ತಿಲ್ಲ: ಪ್ರಿಯಾಂಕ್ ಖರ್ಗೆ

Aug 9, 2023, 10:52 AM IST

ಬೆಂಗಳೂರು (ಆ.09): ಸ್ಯಾಂಡಲ್​ವುಡ್​ ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ  ಅವರ ಮೃತದೇಹದ ಅಂತಿಮ ದರ್ಶನ ಅವರ ತಂದೆ ನಿವೃತ್ತ ಪೊಲೀಸ್ ಅಧಿಕಾರಿ ಬಿ.ಕೆ.ಶಿವರಾಂ ಅವರ ಬೆಂಗಳೂರಿನ ಮಲ್ಲೇಶ್ವರದ ಮನೆಯಲ್ಲಿ ಸಾಗುತ್ತಿದೆ. ಸಚಿವ ಪ್ರಿಯಾಂಕ್ ಖರ್ಗೆ ಅಂತಿಮ ದರ್ಶನವನ್ನು ಪಡೆದು ನಂತರ ಮಾತನಾಡಿದ ಅವರು, ಸ್ಪಂದನಾ‌ ನಿಧನದಿಂದ ಕುಟುಂಬಕ್ಕೆ ಅಷ್ಟೇ ನಷ್ಟ ಆಗಿಲ್ಲ. ಅವರ ಸ್ನೇಹಿತರಿಗೂ ಕೂಡ ನಷ್ಟ ಉಂಟಾಗಿದೆ. ಬಹಳ ಸ್ನೇಹಜೀವಿ ಅವರು. ವಿಜಯ್ ರಾಘವೇಂದ್ರಗೆ ತುಂಬಲಾರದ ನಷ್ಟ ಇದು. 

ನಾನು ವಿಜಯ್ ಬಾಲ್ಯದಿಂದ ಜೊತೆಗೆ ಓದಿದವರು. ಈ ಟೈಂನಲ್ಲಿ ವಿಜಯ್​ಗೆ ಏನ್ ಹೇಳಬೇಕು ಗೊತ್ತಾಗುತ್ತಿಲ್ಲ. ವಿಜಯ್, ಬೇರೆಯವರ ಗೆಲುವಿನಲ್ಲಿ ಸುಖವನ್ನು ಕಾಣುವವರು. ಈ ಕಷ್ಟ ಕಾಲದಲ್ಲಿ ಅವರಿಗೆ ಹಾಗೂ ಕುಟುಂಬದವರಿಗೆ ನಷ್ಟ ಭರಿಸೋ ಶಕ್ತಿ ಕೊಡಲಿ. ವಿಜಯ್ ರಾಘವೇಂದ್ರ ಯಾವುದು ತಾನೊಬ್ಬ ಸ್ಟಾರ್ ಅನ್ನೋ ಅಹಂ ಇರಲಿಲ್ಲ. ಎರಡು ವಾರದ ಹಿಂದೆ ಪೋನ್ ಮಾಡಿದ್ರು. ನಿನಗೆ ಸನ್ಮಾನ ಮಾಡಬೇಕು ಅಂತ ಕಾಲ್ ಮಾಡಿದ್ರು. ಮನೆಯವರು ಎಲ್ಲರೂ ಸೇರೋಣ ಅಂದಿದ್ದರು. ಆದರೆ ಮಂತ್ರಿಯಾದ ಬಳಿಕ ಸ್ವಲ್ಪ ಬ್ಯೂಸಿಯಾದೆ ಎಂದು ಹೇಳಿದರು.