News Hour: ಮುಡಾ ಮರೆಸೋಕೆ ಜಾತಿಗಣತಿ?

Oct 7, 2024, 11:15 PM IST

ಬೆಂಗಳೂರು (ಅ.7): ಮುಡಾ ಟೆನ್ಷನ್ನಲ್ಲಿದ್ದ ಸಿಎಂಗೆ ಜಾತಿಗಣತಿ ಬಲ ಸಿಕ್ಕಿದೆ. ಕಾಂತರಾಜು ವರದಿ ಜಾರಿಗೆ ಅಹಿಂದ ನಾಯಕರ ಆಗ್ರಹ ಪಡಿಸಿದ್ದಾರೆ. ಮುಂದಿನ ವಾರವೇ ನಡೆಯುವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಇನ್ನೊಂದೆಡೆ, ಕಾಂಗ್ರೆಸ್‌ನಲ್ಲಿ ಸಿಎಂ ಕುರ್ಚಿಗಾಗಿ ಸಭೆ ಮೇಲೆ ಸಭೆ ನಡೆಯುತ್ತಿದೆ. ಖರ್ಗೆ ಭೇಟಿಯಾಗಿ ಡಿಕೆಶಿ ಈ ಬಗ್ಗೆ ವರದಿ ನೀಡಿದ್ದಾರೆ. ಪರಮೇಶ್ವರ್, ವಿಜಯೇಂದ್ರ ಜೊತೆ ಸಚಿವ ಸತೀಶ್ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ.

ಉಡಾಫೆ ಮಾತು ಬಿಟ್ಟು ಜನ ಕೊಟ್ಟಿರೋ ಅಧಿಕಾರ ಸರಿಯಾಗಿ ನಿಭಾಯಿಸಲಿ: ಹೆಚ್‌ಡಿಕೆ ವಿರುದ್ಧ ಸಚಿವ ಚಲುವರಾಯಸ್ವಾಮಿ ಕಿಡಿ

ಚನ್ನಪಟ್ಟಣ ಉಪಚುನಾವಣೆಗೆ ಸಂಬಂಧಪಟ್ಟಂತೆ ಮತ್ತೆ ಟಿಕೆಟ್ ಫೈಟ್ ತಾರಕಕ್ಕೇರಿದೆ. ಎಚ್ಡಿಕೆ ಎದುರೇ ನಿಖಿಲ್‌ಗೆ ಟಿಕೆಟ್ ನೀಡುವಂತೆ ಪಟ್ಟು ಹಿಡಿಯಲಾಗಿದೆ. ಇತ್ತ ದೆಹಲಿಯಲ್ಲಿ ಸಿಪಿವೈ ಹೈಕಮಾಂಡ್ ಭೇಟಿ ಮಾಡಿದ್ದಾರೆ.