'ನಾಡಿನ ಒಳಿತಿಗಾಗಿ ರಾಯರು ದಯೆ ತೋರಲಿ'!

Aug 18, 2019, 12:37 PM IST

ಕಲಿಯುಗ ಕಲ್ಪತರು ಶ್ರೀ ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ಅದರಂತೆ ಮಂತ್ರಾಲಯದಲ್ಲಿ ರಾಯರ ಆರಾಧನಾ ಮಹೋತ್ಸವ ನಡೆಯುತ್ತಿದ್ದು, ಚಿತ್ರನಟ ಜಗ್ಗೇಶ್ ಪಾಲ್ಗೊಂಡರು. ರಾಯರ ಪರಮ ಭಕ್ತರಾದ ನಟ ಜಗ್ಗೇಶ್ ಪೂಜಾ ಕಾರ್ಯ ನೆರವೇರಿಸಿ ರಾಜ್ಯದಲ್ಲಿ ಉಂಟಾದ ಪ್ರವಾಹ ಸಂತ್ರಸ್ತರ ಒಳಿತಿಗಾಗಿ ರಾಯರಲ್ಲಿ ಪ್ರಾರ್ಥಿಸಿದರು.